ಮಂಗಳೂರು,ಡಿ.01: ಅತ್ತಾವರ ಕೆಎಂಸಿ ಮೈದಾನದಲ್ಲಿ ಮಣಿಪಾಲ ಸ್ಕೂಲ್ ಮಂಗಳೂರು ಮತ್ತು ಪಿಯರ್ಸನ್ ಸ್ಕೂಲ್ ಸಹಯೋಗದಲ್ಲಿ ಪುಟಾಣಿ ಮಕ್ಕಳ ಮ್ಯಾರಥಾನ್ ‘ಕಿಡ್ಥಾನ್’ ಭಾನುವಾರ ನಡೆಯಿತು.
ಕ್ರೀಡಾಪಟು ವಿಕಾಸ್ ಪುತ್ರನ್ ಕಿಡ್ಥಾನ್ಗೆ ಚಾಲನೆ ನೀಡಿ, ಆರೋಗ್ಯ ಜಾಗೃತಿ ಮತ್ತು ಕ್ರೀಡೆ ಬಗ್ಗೆ ಎಳವೆಯಲ್ಲಿಯೇ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು. ಕ್ರೀಡೆಯಲ್ಲಿ ನಿರಂತರ ತೊಡಗಿಕೊಳ್ಳುವುದರಿಂದ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಆರೋಗ್ಯ ವೃದ್ಧಿಯೂ ಸಾಧ್ಯ. ಇಂಥ ಮ್ಯಾರಥಾನ್ ನಿರಂತರ ನಡೆಯುತ್ತಿರಬೇಕು ಎಂದರು.
ಪುಟಾಣಿಗಳ ಮ್ಯಾರಥಾನ್ನಲ್ಲಿ 10 ಶಾಲೆಗಳ 3ರಿಂದ 14 ವರ್ಷದೊಳಗಿನ 500ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಟೇಬಲ್ ಟೆನ್ನಿಸ್ ಪ್ಲೇಯರ್ ಮತ್ತು ಕೋಚ್ ರಾಜ್ ಅರವಿಂದನ್, ಮಣಿಪಾಲ್ ಸ್ಕೂಲ್ನ ಪ್ರಿನ್ಸಿಪಾಲ್ ಅನುರಾಧ ಶಿವರಾಮ್ ಉಪಸ್ಥಿತರಿದ್ದರು.