ಕನ್ನಡ ವಾರ್ತೆಗಳು

ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ವ್ಯಕ್ತಿ ಮೃತದೇಹ ಪತ್ತೆ

Pinterest LinkedIn Tumblr

river..

 

(ಸಾಂದರ್ಭಿಕ ಚಿತ್ರ)

ಕುಂದಾಪುರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೋರ್ವ ನೀರುಪಾಲಾಗಿದ್ದ ಘಟನೆ ಶುಕ್ರವಾರ ಸಂಜೆ ಆವರ್ಸೆ ಗ್ರಾಮದ ಕಿರಾಡಿ ಸೀತಾನದಿಯಲ್ಲಿ ನಡೆದಿದ್ದು, ಕಾಣೆಯಾದ ವ್ಯಕ್ತಿಯ ಮೃತದೇಹ ಶನಿವಾರ ಮಧ್ಯಾಹ್ನದ ವೇಳೆಗೆ ಮುಳುಗು ತಜ್ಞರ ಸಹಕಾರದಿಂದ ಲಭಿಸಿದೆ.

ಉಡುಪಿ ತಾಲೂಕಿನ ಚೇರ್ಕಾಡಿಯ ತೆಂಗಿನಜೆಡ್ಡು ಕನ್ನಾರು ನಿವಾಸಿ ಕೃಷ್ಣ ಮರಕಾಲ (43) ಎನ್ನುವವರು ನೀರುಪಾಲದ ದುರ್ದೈವಿಯಾಗಿದ್ದಾರೆ.

ಘಟನೆ ಹಿನ್ನೆಲೆ: ಕೃಷ್ಣ ಮರಕಾಲ ಅವರು ಗ್ರಾನೈಟ್ ಕೆಲಸ ಮಾಡಿಕೊಂಡಿದ್ದು, ಆವರ್ಸೆ ಗ್ರಾಮದ ಕಿರಾಡಿ ಕೆಳಮಠದ ಉಮೇಷ ಅಡಿಗರ ಮನೆಯಲ್ಲಿ ಶುಕ್ರವಾರದಂದು ಗ್ರಾನೈಟ್ ಕೂಡಿಸುವ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿದ ಬಳಿಕ ಸಂಜೆ ಕಿರಾಡಿಯ ಸೀತಾನದಿಗೆ ಸ್ನಾನಕ್ಕೆಂದು ತೆರಳಿದ್ದು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಇತರೇ ಮೂವರು ಇದ್ದರು ಎನ್ನಲಾಗುತ್ತಿದ್ದು ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ವಿಚಾರ ತಿಳಿಯುತ್ತಿದ್ದಂತೆಯೇ ಉಮೇಶ ಅಡಿಗರು ಕೃಷ್ಣ ಮರಕಾಲ ಮನೆಗೆ ವಿಚಾರ ತಿಳಿಸಿ ಎಲ್ಲರೂ ಸೇರಿ ಹೊಳೆಯಲ್ಲಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಸತತ ಹುಡುಕಾಟದ ಬಳಿಕ ಮುಳುಗು ತಜ್ಞರ ಸಹಕಾರದೊಂದಿಗೆ ನದಿಯಲಿರುವ ಶವವನ್ನು ಮೇಲಕ್ಕೆತ್ತಲಾಗಿದೆ. ಸುಳಿ ಇರುವ ಈ ಪ್ರದೇಶದಲ್ಲಿ ಕೃಷ್ಣ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಬಗ್ಗೆ ಮಾಹಿತಿಯಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment