ಕನ್ನಡ ವಾರ್ತೆಗಳು

ಮನೋರಂಜನೆ ಜೊತೆಗೆ ಎಚ್‌ಐವಿ ಜಾಗೃತಿಗಾಗಿ ಯಕ್ಷಗಾನ ಪ್ರದರ್ಶನ

Pinterest LinkedIn Tumblr

ಕುಂದಾಪುರ : ರಾಜ್ಯ ಏಡ್ಸ್ ನಿಯಂತ್ರಣ ಸಂಘ ಮತ್ತು ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಪ್ರಾಯೋಜಕತ್ವದಲ್ಲಿ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಸಿದ್ಧಾಪುರದ ಶಂಭುಲಿಂಗೇಶ್ವರ ಯಕ್ಷನಾಟ್ಯ ಮೇಳದವರ ಯಕ್ಷಗಾನ ಪ್ರದರ್ಶನ ನಡೆಯಿತು.

Aids_Jagrati_Yakshagana

ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ, ಶುಶ್ರೂಷಕಿ ಶೋಭಾ, ಆರೋಗ್ಯ ಸಹಾಯಕರಾದ ಅರ್ಪಿತಾ, ಕಿರಣ್, ಆರೋಗ್ಯ ಮಿತ್ರ ಕಸ್ತೂರಿ, ಸಿಬ್ಬಂದಿ ಸುಷ್ಮಾ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಲಾವಿದರಾದ ವಸಂತ ಹೆಗಡೆ, ಪ್ರಶಾಂತ ಹೆಗಡೆ, ಗಣಪತಿ ಎಸ್, ಮಂಜುನಾಥ ಹೆಗಡೆ, ಮಹಾಬಲೇಶ್ವರ ಎಂ, ಮಹಾಬಲೇಶ್ವರ ಜಿ, ಪ್ರಸನ್ನ ಭಟ್ಟ, ವೆಂಕಟರಮಣ ಅವರು ನೀಡಿದ ಪ್ರದರ್ಶನ ಜನರಂಜನೆಯ ಜತೆಗೆ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವಲ್ಲಿ ಹಾಗೂ ರಕ್ತದಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಯಶಸ್ವಿಯಾಯಿತು.

Write A Comment