ಬೆಂಗಳೂರು: ಮಂಗಳವಾರ ಬೆಂಗಳೂರುನಲ್ಲಿ ನಡೆದ ಪುನೀತ್ ನಮನ’ ಕಾರ್ಯಕ್ರಮದಲ್ಲಿ ತಮಿಳು ನಟ ವಿಶಾಲ್ ಕೂಡ ಭಾಗವಹಿಸಿ ಮಾತನಾಡಿದರು.

ಅಣ್ಣಾವ್ರ ಮಗ ಪುನೀತ್ ರಾಜ್ಕುಮಾರ್ 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದರು. ಪುನೀತ್ ರಾಜ್ಕುಮಾರ್ ನಿಧನದ ಬಳಿಕ ‘’ಆ ಎಲ್ಲಾ 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನನ್ನದು’’ ಅಂತ ವಿಶಾಲ್ ಹೇಳಿದ್ದರು. ‘ಪುನೀತ್ ನಮನ’ ಕಾರ್ಯಕ್ರಮದಲ್ಲೂ ಇದರ ಬಗ್ಗೆಯೇ ನಟ ವಿಶಾಲ್ ಮಾತಿಗಿಳಿದರುಳಳಲ
‘’ನನಗೆ ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು. ನಮ್ಮ ತಂದೆ ಕನ್ನಡಿಗ. ಪುನೀತ್… ನನ್ನ ಅಣ್ಣ. ಪುನೀತ್ ಅವರ ಮುಖ ಇನ್ನೂ ನನ್ನ ಕಣ್ಣ ಮುಂದೆ ಕಾಣಿಸುತ್ತಿದೆ. ಅವರಿಲ್ಲ ಎಂಬುದನ್ನ ಎರಡು ದಿನ ನನ್ನಿಂದ ನಂಬೋದಕ್ಕೆ ಆಗಲಿಲ್ಲ. ಪುನೀತ್ ಅವರ ನಿಧನವಾರ್ತೆ ಕಿವಿಗೆ ಬಿದ್ದಾಗ ನನ್ನಿಂದ ಅರಗಿಸಿಕೊಳ್ಳಲು ಆಗಲಿಲ್ಲ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನನಗೆ ಧೈರ್ಯ ಬರಲಿಲ್ಲ’’
‘’ನಾನು ನನ್ನ ಪುನೀತ್ ಅಣ್ಣನಿಗೆ ಒಂದು ಮಾತು ಕೊಟ್ಟಿದ್ದೇನೆ. ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಕುಟುಂಬದ ಬಳಿ ನಾನು ಒಂದು ಕೋರಿಕೆ ಇಡುತ್ತಿದ್ದೇನೆ. ಅದೇನಂದರೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ನನಗೊಂದು ಅವಕಾಶ ಕೊಡಿ. ಇದನ್ನ ನಾನು ಮಾಡುತ್ತಿರುವುದು ಪಬ್ಲಿಸಿಟಿಗಾಗಿ ಅಲ್ಲ, ಹಣಕ್ಕಾಗಿ ಅಲ್ಲ. ನಿಜ ಹೇಳಬೇಕು ಅಂದರೆ ಈವರೆಗೂ ನನಗೆ ಅಂತ ಒಂದು ಸ್ವಂತ ಮನೆಯಿಲ್ಲ. ಒಂದು ಮನೆ ತೆಗೆದುಕೊಳ್ಳಬೇಕು ಅಂತ ದುಡ್ಡು ಇಟ್ಟಿದ್ದೆ. ಅದು ಪರ್ವಾಗಿಲ್ಲ. ಮುಂದಿನ ವರ್ಷ ಕೂಡ ನಾನು ಮನೆಯನ್ನು ಕೊಂಡುಕೊಳ್ಳಬಹುದು. ಆದರೆ, ಮಕ್ಕಳ ಶಿಕ್ಷಣ ತುಂಬಾ ಮುಖ್ಯ. ಪುನೀತ್ ಹೆಸರನ್ನ ಎಷ್ಟು ವರ್ಷಗಳಾದರೂ ಸರಿ.. ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವರು ಯಾರಿಗೂ ಹೇಳದೆ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಅವರು ಹೋದ ಮೇಲೆಯೇ ಅವರ ಹೃದಯವಂತಿಕೆ ಎಲ್ಲರಿಗೂ ಗೊತ್ತಾಗಿದೆ. ಪುನೀತ್ ಅವರಂತ ವ್ಯಕ್ತಿಯನ್ನ ಯಾರೂ ಮರೆಯೋಕೆ ಸಾಧ್ಯವಿಲ್ಲ. ಪುನೀತ್ ಅವರ ಜೊತೆಗೆ ನಾನು ಅಷ್ಟು ಕ್ಲೋಸ್ ಆಗಿರಲಿಲ್ಲ. ಆದರೂ ನನಗೇ ಎರಡು ದಿನ ನಿದ್ದೆ ಬರಲಿಲ್ಲ. ಪುನೀತ್ ಆತ್ಮ ಸಂತೋಷವಾಗಿರಬೇಕು ಅಂದ್ರೆ ಅವರು ಮಾಡಿದ ಒಳ್ಳೆಯ ಕೆಲಸಗಳು ಮುಂದುವರೆಯಬೇಕು’ ಎಂದು ಹೇಳಿದರು.
Comments are closed.