ಉಡುಪಿ: ಹೊಳೆಯಲ್ಲಿ ಮೀನು ಹಿಡಿಯಲು ತೆರಳಿದ್ದ ದೈವ ನರ್ತಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾದ ಘಟನೆ ಶಿರ್ವ ನಡಿಬೆಟ್ಟು ಅಣೆಕಟ್ಟು ಬಳಿ ಭಾನುವಾರ ಸಂಜೆ ನಡೆದಿದೆ.

ಶಿರ್ವ ಮಟ್ಟಾರು ನಿವಾಸಿ ದಿಲೀಪ್ (33) ನೀರು ಪಾಲಾದ ದುರ್ದೈವಿ. ಮೂರು ಮಂದಿ ಮೀನಿಗೆ ಗಾಳ ಹಾಕಲು ಹೊಳೆ ಬದಿಗೆ ಬಂದಿದ್ದು ಈ ಪೈಕಿ ದಿಲೀಪ್ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ದಿಲೀಪ್ ಕರಾವಳಿಯ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ,ಸೇವಕರಾಗಿ ಸೇವೆ ಮಾಡಿಕೊಂಡು ಬಂದವರು. ಬಬ್ಬು ಸ್ವಾಮಿ ದೈವದ ನರ್ತಕರಾಗಿ ಅತೀ ಹೆಚ್ಚು ಪ್ರಸಿದ್ದಿಗಳಿಸಿದ್ದರು.
ಮುಂದುವರಿದ ಕಾರ್ಯಚರಣೆ..
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಆಗಮಿಸಿ ಕಾರ್ಯಚರಣೆ ನಡೆಸಿದ್ದಾರೆ. ತಡರಾತ್ರಿ ತನಕ ಕಾರ್ಯಚರಣೆ ನಡೆದಿತ್ತು. ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಳಕಿನ ಅಡಚನೆಯಿಂದಾಗಿ ಕಾರ್ಯಚರಣೆ ಸ್ಥಗಿತಗೊಂಡಿದ್ದು. ಇಂದು ಬೆಳ್ಳಿಗೆನಿಂದ ಮತ್ತೆ ಶೋಧ ಕಾರ್ಯ ಆರಂಭಗೊಂಡಿದೆ.
Comments are closed.