ಕರ್ನಾಟಕ

ನಾನೂ ನೂರಾರು ದೇವಸ್ಥಾನಗಳನ್ನು ನಿರ್ಮಿಸಿದ್ದಾನೆ, ಅದಕ್ಕೇನು? ರಾಮಮಂದಿರ ಕುರಿತು ಎಚ್‌.ಡಿ ರೇವಣ್ಣ

Pinterest LinkedIn Tumblr

ತುಮಕೂರು: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸದ ಕುರಿತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಗುರವಾಗಿ ಮಾತನಾಡಿದರು.

ಶಿರಾದ ಜೆಡಿಎಸ್‌ ಶಾಸಕ ಬಿ. ಸತ್ಯನಾರಾಯಣ್ ಅವರು ವಿಧವಶರಾದ ಹಿನ್ನೆಲೆಯಲ್ಲಿ ಮೃತರ ಅಂತಿಮ ದರ್ಶನಕ್ಕೆಂದು ತುಮಕೂರಿಗೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸದ ಕುರಿತ ಮಾತನಾಡಿ, ನಾನು ಕೂಡ ನಮ್ಮಲ್ಲಿ ನೂರು ದೇವಸ್ಥಾನ ಕಟ್ಟಿದ್ದೇನೆ ನಾನೇನು ಹೇಳೋದು. ದೇಶದ ಜನ ಸಂಕಷ್ಟದಲ್ಲಿದ್ದಾರೆ. ಆದರೂ ದೇವರ ಕಾರ್ಯ ಮಾಡ್ತಿದಾರೆ ಮಾಡಲಿ. ಯಾರು ಬೇಡ ಅಂತಾ ಹೇಳಿದ್ದು. ಏನೊ ಮಾಡ್ತಿದ್ದಾರೆ ಮಾಡಲಿ. ಇದಕ್ಕೆ ರಾಜಕೀಯ ಬೆರೆಸೋ ಅವಶ್ಯಕತೆ ಇಲ್ಲ ಎಂದು ಹೇಳಿದರು.

ರಾಮ,ಲಕ್ಷ್ಮಣ, ಸೀತೆ ಅಂತ ಐತಿಹಾಸಿಕ ದೇವಸ್ಥಾನಗಳು ನಮ್ಮಲ್ಲೂ ಇವೆ. ಅದರ ಬಗ್ಗೆ ನಾವೇನು ಕಾಮೆಂಟ್ ಮಾಡಲ್ಲ. ರಾಮ ಒಂದು ಪಕ್ಷಕ್ಕೆ ಸೀಮಿತ ಅಲ್ಲ. ದೇಶದ 130 ಕೋಟಿ ಜನಕ್ಕೂ ರಾಮನಿದ್ದಾನೆ ಎಂದು ಎಚ್‌.ಡಿ. ರೇವಣ್ಣ ಹೇಳಿದರು.

ಬಿ. ಸತ್ಯನಾರಾಯಣ ಅವರು ನಿಷ್ಠಾವಂತರು
ವಿಧಿವಶರಾಗಿರುವ ಬಿ. ಸತ್ಯನಾರಾಯಣ ಅವರ ಕುರಿತು ಮಾತನಾಡಿ, 30 ವರ್ಷದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಎರಡು ಬಾರಿ ಸಚಿವರಾಗಿದ್ದರು. ಬಡವರಿಗೆ, ರೈತರಿಗೆ ಆಗುವ ಅನ್ಯಾಯದ ವಿರುದ್ಧ ದನಿಯಾಗಿದ್ದ ರಾಜಕಾರಣಿ. ಕೊನೆವರೆಗೂ ಪಕ್ಷದ ನಿಷ್ಠಾವಂತರಾಗಿದ್ದರು ಎಂದು ಸ್ಮರಿಸಿದರು.

ಇಂದು ಹಾದಿ ತಪ್ಪಿ ಹೋಗುವ ರಾಜಕಾರಣವಿದೆ. ಆದರೆ, ಸತ್ಯನಾರಾಯಣ. ಯಾರು ಏನೇ ಹೇಳಿದರು, ಪಕ್ಷಕ್ಕೆ ನಿಷ್ಠರಾಗಿದ್ದರು. ಇಂದು ನಮ್ಮನ್ನು ಬಿಟ್ಟು ಹೋಗಿದ್ದಾರೆ. ತುಂಬು ಕುಟುಂಬ ಅವರದ್ದು, ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ.

ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ : ಎಚ್‌.ಡಿ. ದೇವೇಗೌಡ
ಬಿ.ಸತ್ಯನಾರಾಯಣ ಅವರ ಅಗಲಿಕೆಯಿಂದ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಕುಟುಂಬಕ್ಕೆ ನೋವು ತುಂಬಿಕೊಳ್ಳುವ ಶಕ್ತಿ ದೇವರು ನೀಡಲಿ. ಈ ಪಕ್ಷ ಆ ಕುಟುಂಬವನ್ನು ಬಿಟ್ಟುಕೊಡಲ್ಲ, ಕೊನೆವರೆಗೂ ಅವರ ಜೊತೆಗೆ ಇರುತ್ತೇವೆ. 30 ವರ್ಷದಿಂದ ಇದ್ದಾರೆ ಅವತ ಕುಟುಂಬ ಜೊತೆಗೆ ನಿಲ್ಲುವುದು ನಮ್ಮ ಜವಾಬ್ದಾರಿ ಎಂದು ಎಚ್‌.ಡಿ. ದೇವೇಗೌಡ ಹೇಳಿದರು.

 

Comments are closed.