ಮಂಗಳೂರು, ಮಾರ್ಚ್. 12 ; ದಕ್ಷಿಣ ಭಾರತದ ಪ್ರಸಿದ್ಧ ಟೆಕ್ಸ್ಟೈಲ್ ಬ್ರಾಂಡ್ ಜಯಲಕ್ಷ್ಮೀ ಫ್ಯಾಮಿಲಿ ಫ್ಯಾಶನ್ ಸ್ಟೋರ್ನ ಮೆಗಾ ಶೋರೂಂ ಗುರುವಾರ ಮಂಗಳೂರಿನ ಪ್ರಮುಖ ಸ್ಥಳವಾದ ಬಿಜೈನಲ್ಲಿ ಶುಭಾರಂಭಗೊಂಡಿತು.
ನೂತನ ಬೃಹತ್ ಶೋರೂಂನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹಮದ್ ಮುಸ್ಲಿಯಾರ್ ಹಾಗೂ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಉದ್ಘಾಟನೆ ಮಾಡಿ ಶುಭಾ ಕೋರಿದರು.
ಉದ್ಗಾಟನಾ ಸಮಾರಂಭದಲ್ಲಿ ಸಂಸ್ಥೆಯ ಮಾಲಕರಾದ ಎನ್. ನಾರಾಯಣ ಕಾಮತ್, ಎನ್.ಗೋವಿಂದ ಕಾಮತ್, ಎನ್.ಸತೀಶ್ ಕಾಮತ್, ಮತ್ತು ಕುಟುಂಬಸ್ಥರು,ಅತಿಥಿಗಳಾಗಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ,ಮೀನಾಕ್ಷಿ ಶಾಂತಿಗೋಡು,ಅದ್ಯಕ್ಷರು,ಜಿ.ಪಂ, ಜೆ.ಆರ್.ಲೋಬೊ,ಮಾಜಿ ಶಾಸಕರು,ಅಬ್ದುಲ್ ರವೂಫ್,ವಿಪಕ್ಷ ನಾಯಕ ರು, ಕಾರ್ಪೊರೇಟರ್ ಸುದೀರ್ ಶೆಟ್ಟಿ, ಭಾರತ್ ಮಾಲ್ ಸಂಸ್ಥೆಯ ಪಾಲುದಾರಗಳಾದ ಆನಂದ ಪೈ,ಸುಬ್ರಾಯ ಪೈ,ಸುದೀರ್ ಪೈ,ವೆಂಕಟೇಶ ಪೈ,ಜಯಲಕ್ಷ್ಮಿ ಸಂಸ್ಥೆಯ ಸ್ಟೋರ್ ಮೆನೇಜರ್ ಗಳಾದ ಅನೀಶ್,ಅಜಿತ್,ರಾಜೀವ್ ತ್ರಿ ವೆಡ್ರಮ್,ಮಂಗಳೂರು ಸ್ಟೋರ್ ಮ್ಯಾನೇಜರ ರಾಜೇಂದ್ರ ಉಳ್ಳಾಲ ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ಕರ್ನಾಟಕದ ಅತೀ ದೊಡ್ಡ ಶೋ ರೂಂ:
ಸಿದ್ದ ಉಡುಪು, ಸೀರೆ ಮೊದಲಾದ ಉಡುಪುಗಳಿಗೆ ದಕ್ಷಿಣ ಭಾರತದಲ್ಲಿಯೇ ಹೆಸರಾದ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮಿ’ ಯ ಬೃಹತ್ ಮಳಿಗೆಯು 1 ಲಕ್ಷ ಚ.ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಕರ್ನಾಟಕದ ಅತೀ ದೊಡ್ಡ ಶೋ ರೂಂ ಆಗಿದೆ. 4 ಮಹಡಿಗಳ ಬೃಹತ್ ಶಾಪಿಂಗ್ ಮಾಲ್ನಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ.
ವಧುವಿನ ಸೀರೆಗಳು, ಡಿಸೈನರ್ ವೇರ್, ಜಂಟ್ಸ್ ಕಲೆಕ್ಷನ್ಸ್ನಿಂದ ಮಕ್ಕಳ ಉಡುಗೆಗಳವರೆಗೆ, ಅತ್ಯುತ್ತಮ ಮತ್ತು ನೂತನ ಕಲೆಕ್ಷನ್ ಜಯಲಕ್ಷ್ಮಿ ಫ್ಯಾಷನ್ನಲ್ಲಿ ಲಭ್ಯವಿದೆ.
ಬಹುಮಹಡಿ ಕಟ್ಟಡದಲ್ಲಿ ಚೂಡಿದಾರ್, ಚೂಡಿದಾರ್ ಮೆಟೀರಿಯಲ್ಸ್ಗಳು, ಡ್ರೆಸ್ ಮೆಟೀರಿಯಲ್ಸ್ಗಳು, ಎತ್ನಿಕ್ ವೇರ್ಗಳು, (ನೆಲ ಮಹಡಿಯಲ್ಲಿ), ಮಕ್ಕಳ ಉಡುಗೆ ತೊಡುಗೆಗಳು, ಪಾಶ್ಚಿಮಾತ್ಯ ಉಡುಗೆ (1ನೇ ಮಹಡಿಯಲ್ಲಿ), ಪುರುಷರ ಉಡುಗೆ ತೊಡುಗೆಗಳು, ಬ್ಲೌಸ್ ಮೆಟೀರಿಯಲ್ಸ್, ಒಳ ಉಡುಪುಗಳು (2ನೇ ಮಹಡಿಯಲ್ಲಿ) ಲೆಹೆಂಗಾ ಮತ್ತು ಸೀರೆಗಳ ಸಂಗ್ರಹ (3ನೇ ಮಹಡಿಯಲ್ಲಿ). ಕಾರ್ ಪಾರ್ಕಿಂಗ್ಗಾಗಿ ನೆಲಮಾಳಿಗೆಯಲ್ಲಿರುವ 2 ಮಹಡಿಗಳನ್ನು ಕಾಯ್ದಿರಿಸಿದ್ದು ಇಲ್ಲಿ ಸುಮಾರು 250 ವಾಹನಗಳ ಪಾರ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಪುಟ್ಟ ಮಕ್ಕಳಿಗಾಗಿ ಮೋಜನ್ನು ನೀಡುವ ಸಲುವಾಗಿ ಮಕ್ಕಳ ಆಟದ ಸ್ಥಳವನ್ನು ಮೀಸಲಿರಿಲಾಗಿದೆ. ವ್ಯಾಪಕ ಸಂಗ್ರಹದ, ಅತ್ಯುತ್ತಮ ಗುಣಮಟ್ಟದ ಉತ್ತಮ ಶ್ರೇಣಿಯ ಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮಿ, ಪ್ರತಿದಿನವು ಶಾಪಿಂಗ್ ಮಾಡುವ ಭರವಸೆಯನ್ನ ನೀಡುತ್ತದೆ.
ಜವಳಿ ಕ್ಷೇತ್ರದಲ್ಲಿ ತನ್ನ 7 ದಶಕಗಳ ಪರಿಣತಿ ಹೊಂದಿರುವ ಜಯಲಕ್ಷ್ಮಿ ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಷನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದು, ಪ್ರತಿಯೊಂದು ವಿಭಾಗದ ಜನರ ಅಭಿರುಚಿಯನ್ನು ಪೂರೈಸಲು ಸಜ್ಜಾಗಿದೆ. ನವ ವಿನ್ಯಾಸದೊಂದಿಗೆ ನೂತನ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ವಿಶಾಲವಾದ ಶೋ ರೂಂ, ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು 500ಕ್ಕೂ ಹೆಚ್ಚು ಹರ್ಷಚಿತ್ತದ ಉತ್ಸಾಹಿ ಸಿಬ್ಬಂದಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತರರಾಷ್ಟ್ರೀಯ ಶಾಪಿಂಗ್ ಅನುಭವವನ್ನು ನೀಡಲಿದೆ ಎಂದು ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಎನ್. ನಾರಾಯಣ ಕಾಮತ್ ಅವರು ತಿಳಿಸಿದರು.
“ಜಯಲಕ್ಷ್ಮಿ” 1947ರಲ್ಲಿ ಆರಂಭ
ಜಯಲಕ್ಷ್ಮಿ ಮಳಿಗೆಯನ್ನು 1947ರಲ್ಲಿ ಕೊಚ್ಚಿನ್ನ ಕ್ಲೋತ್ ಬಜಾರ್ ರಸ್ತೆಯಲ್ಲಿ ದಿವಂಗತ ಶ್ರೀ ಆರ್. ನರಸಿಂಹ ಕಾಮತ್ ಅವರು ಸ್ಥಾಪಿಸಿದರು. ಪ್ರಾರಂಭದಲ್ಲಿ 200 ಚದರ ಅಡಿ ಅಳತೆಯ ಸಣ್ಣ ಅಂಗಡಿಯೊಂದಿಗೆ ವ್ಯವಹಾರವು ಪ್ರಾರಂಭಗೊಂಡಿತು.
1997ರಲ್ಲಿ, ದಿವಂಗತ ಶ್ರೀ ಆರ್ ನರಸಿಂಹ ಕಾಮತ್ರವರ ಮೂವರು ಪುತ್ರರು. ಶ್ರೀ ಎನ್. ನಾರಾಯಣ ಕಾಮತ್, ಶ್ರೀ ಎನ್. ಗೋವಿಂದ್ ಕಾಮತ್ ಮತ್ತು ಶ್ರೀ ಎನ್. ಸತೀಶ್ ಕಾಮತ್, ಎಂಜಿ ರೋಡ್ ಕೊಚ್ಚಿನ್ನಲ್ಲಿ 60,000ಚದರ ಅಡಿ ಅತ್ಯಾಧುನಿಕ ಶೋ ರೂಂ ಅನ್ನು ತೆರೆದರು. ಗ್ರಾಹಕರಿಗೆ ಉತ್ತಮ ಗುಣಮಟ್ಟ ಮತ್ತು ಫ್ಯಾಶನ್ ಉಡುಪುಗಳನ್ನು ಒದಗಿಸುವ ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ ಉತ್ತಮ ದೃಷ್ಟಿಕೋನದೊಂದಿಗೆ ತಮ್ಮ ಸಂಸ್ಥೆಯ ಬೆಳವಣಿಗೆಯ ಕಥೆಯನ್ನು ಪ್ರಾರಂಭಿಸಿದರು.
ಗುಣಮಟ್ಟದೊಂದಿಗೆ ಉತ್ಕೃಷ್ಟ ಸೇವೆಗೆ ಹೆಸರುವಾಸಿ ;
15 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಜಯಲಕ್ಷ್ಮಿ ಬ್ರಾಂಡ್ ಕೇರಳದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಅಲ್ಲದೆ ತಿರುವನಂತಪುರ, ತ್ರಿಶೂರ್ ಮತ್ತು ಕ್ಯಾಲಿಕಟ್ನಲ್ಲಿ ಭವ್ಯವಾದ ಶೋ ರೂಂಗಳನ್ನು ತೆರೆಯಿತು. ಇಂದು ಜಯಲಕ್ಷ್ಮಿ ಬ್ರ್ಯಾಂಡ್ ತನ್ನ ಗುಣಮಟ್ಟದ ಉತ್ಪನ್ನಗಳು, ಅತೀ ಅದ್ಭುತ ಸಂಗ್ರಹಗಳು ಮತ್ತು ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿದೆ.
ಕಳೆದ 7 ದಶಕಗಳಲ್ಲಿ ಲಕ್ಷಾಂತರ ನಿಷ್ಠಾವಂತ ಗ್ರಾಹಕರಿಗೆ ಸೇವೆ ಸಲ್ಲಿಸಿದ ಜಯಲಕ್ಷ್ಮಿ ಬ್ರ್ಯಾಂಡ್ ಮದುವೆಯ ರೇಷ್ಮೆ ಸೀರೆಗಳ ಬೃಹತ ಸಂಗ್ರಹಗಳ ಮಧ್ಯೆ ವಧುವಿನ ಶೃಂಗಾರದ ಉಡುಪುಗಳ ಸಂಗ್ರಹ ತಾಣ‘ (ಬ್ರೈಡಲ್ ಡೆಸ್ಟಿನೇಶನ್) ಎಂಬ ಟ್ಯಾಗ್ನ್ನು ಹೊಂದಿದೆ.












Comments are closed.