ಕರ್ನಾಟಕ

ಮಧ್ಯರಾತ್ರಿ ಮೇಕಪ್ ಹಾಕಿ ವಿಡಿಯೋ ! ನಿತ್ಯಾನಂದ ಆಶ್ರಮದ ಕರಾಳತೆ ಬಿಚ್ಚಿಟ್ಟ ಬಾಲಕಿ

Pinterest LinkedIn Tumblr


ಬೆಂಗಳೂರು: ಸ್ವಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಆಶ್ರಮದ ಕರಾಳತೆಗಳು ಒಂದೊಂದಾಗಿ ಬಹಿರಂಗಗೊಳ್ಳಲಾರಂಭಿಸಿದೆ. ನಿತ್ಯಾನಂದ ಸ್ವಾಮಿಯ ಗುಜರಾತಿನ ಅಹಮ್ಮದಾಬಾದ್ ಆಶ್ರಮದಲ್ಲಿ ಅಕ್ರಮವಾಗಿ ಕೂಡಿಹಾಕಲಾಗಿದ್ದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಲಾಗಿತ್ತು. ರಕ್ಷಣೆಗೊಳಪಟ್ಟ ಬಾಲಕಿಯರು ಆಶ್ರಮದ ಅನ್ಯಾಯ, ಅಕ್ರಮಗಳನ್ನು ಬಿಚ್ಚಿಡುತ್ತಿದ್ದು ನಿತ್ಯಾನಂದ ಸ್ವಾಮಿಯ ಕರಾಳ ಕೃತ್ಯಗಳು ಬಹಿರಂಗಗೊಳ್ಳುತ್ತಿವೆ.

ಆಶ್ರಮದಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಬಾಲಕಿಯರಿಗೆ ನಿತ್ಯ ಮಾನಸಿಕ ಹಿಂಸೆ ನೀಡಲಾಗುತಿತ್ತು. ಮಧ್ಯ ರಾತ್ರಿ ನಿತ್ಯಾನಂದ ಸೂಚನೆಯಂತೆ ಬಾಲಕಿಯರನ್ನು ನಿದ್ದೆಯಿಂದ ಎಬ್ಬಿಸಿ ವಿಡಿಯೋಗಾಗಿ ಚಿನ್ನಾಭರಣ ತೊಡುವಂತೆ ಹಾಗೂ ಮೇಕಪ್ ಹಾಕಿಕೊಳ್ಳುವಂತೆ ಸೂಚಿಸಲಾಗಿತಿತ್ತಂತೆ. ನಿತ್ಯಾನಂತದ ಶಿಷ್ಯೆಯಂದಿರು ಬಾಲಕಿಯರ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ವಿಡಿಯೋದಲ್ಲಿ ಬಾಲಕಿಯರಿಗೆ ತಮ್ಮ ಪೋಷಕರ ವಿರುದ್ಧ ಮಾತನಾಡುವಂತೆ ಸೂಚಿಸಲಾಗುತಿತ್ತು.

ರಕ್ಷಣೆಗೊಳಗಾದ ಬಾಲಕಿ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, 2013 ರಲ್ಲಿ ನಿತ್ಯಾನಂದ ಸ್ವಾಮಿಯ ಗುರುಕುಲ ಆಶ್ರಮಕ್ಕೆ ಬೆಂಗಳೂರು ಮೂಲಕ ಇಬ್ಬರು ಸಹೋದರಿಯರು ಸೇರಿಕೊಂಡಿದ್ದಾರೆ. 2017 ರವರೆಗೂ ಆಶ್ರಮದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದ್ರೆ ಬಳಿಕ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗತೊಡಗಿದವು. ಆಶ್ರಮಕ್ಕಾಗಿ ಬಾಲಕಿಯರನ್ನು ಬಳಸಿಕೊಂಡು ಚಂದಾ ಸಂಗ್ರಹ ಮಾಡಲಾಗುತ್ತಿತ್ತು.

ಮೂರು ಲಕ್ಷದಿಂದ 8 ಕೋಟಿಯ ವರೆಗೂ ಚಂದಾ ಸಂಗ್ರಹ ಮಾಡಲಾಗಿತಿತ್ತು. ಕೆಲವರಿಂದ ಆಶ್ರಮಕ್ಕೆ ಎಕರೆಗಟ್ಟಲೆ ಭೂಮಿಯನ್ನು ಪಡೆದುಕೊಳ್ಳಲಾಗುತಿತ್ತು ಎಂಬ ವಿಚಾರಗಳು ಬೆಳಕಿಗೆ ಬಂದಿವೆ. ಆಶ್ರಮದಿಂದ ಹಿಂಸೆಯನ್ನು ಅನುಭವಿಸುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡುವಂತೆ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಸೂಚನೆಯಂತೆ ಮಕ್ಕಳ ಕಲ್ಯಾಣ ಸಮಿತಿ ಸಹಕಾರದೊಂದಿದೆ ಬಾಲಕಿಯರನ್ನು ರಕ್ಷಣೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿತ್ಯಾನಂದ ಆಶ್ರಮದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಿತ್ಯಾನಂದ ಸ್ವಾಮಿಯ ಶಿಷ್ಯೆಯಂದಿದಾದ ಪ್ರಣಪ್ರಿಯಾ ಹಾಗೂ ಪ್ರಿಯತತ್ವ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ನಡುವೆ ನಿತ್ಯಾನಂದ ಸ್ವಾಮಿ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಾಗಿದ್ದು ತಲೆಮರೆಸಿಕೊಂಡಿದ್ದಾರೆ.

ಪ್ರಕರಣದ ದಾಖಲಾದ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಭಾರತದಿಂದ ನಕಲಿ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ವಾಮಿಯ ವಿರುದ್ಧ ಸಾಕ್ಷಾಧಾರಗಳನ್ನು ಪೊಲೀಸರು ಕಲೆ ಹಾಕುತಿದ್ದು ಶೀಘ್ರದಲ್ಲೇ ಬಂಧಿಸುವ ಭರವಸೆಯನ್ನು ಗುಜರಾತ್ ಪೊಲೀಸರು ನೀಡಿದ್ದಾರೆ.

Comments are closed.