ಕ್ರೀಡೆ

ಟೀಂ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ದೇಶದ ಕ್ರಿಕೆಟ್ ಅಭಿಮಾನಿಗಳು

Pinterest LinkedIn Tumblr


ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧದ ಭಾರತ ತಂಡದ ನಿಧಾನ ಗತಿಯ ಆಟ ವ್ಯಾಪಕ ಟೀಕೆಗೊಳಗಾಗಿದೆ. ರನ್‌ ಚೇಸಿಂಗ್‌ ವೇಳೆ ಭಾರತೀಯರು ನೈಜ ಆಟ ಪ್ರದರ್ಶಿಸಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರರು ಆರೋಪಿಸಿದರೆ, ಅಂತಿಮ ಓವರ್‌ಗಳಲ್ಲಿ ಧೋನಿ ಹಾಗೂ ಕೇದಾರ್‌ ಜಾಧವ್‌ ನಿಧಾನ ಗತಿಯ ಆಟವಾಡಿದ್ದನ್ನು ಭಾರತ ತಂಡದ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ನಿಧಾನ ಬ್ಯಾಟಿಂಗ್‌
ಧೋನಿ ಹಾಗೂ ಕೇದಾರ್‌ ಜಾಧವ್‌ ಜೋಡಿ ಕೊನೆಯ 5 ಓವರ್‌ಗಳಲ್ಲಿ 39 ರನ್‌ ಪೇರಿಸಿರುವ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಐದು ವಿಕೆಟ್‌ಗಳು ಉಳಿದಿರುವಾಗ ನಿಧಾನ ಆಟಕ್ಕೆ ಮೊರೆ ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಧೋನಿ ತಪ್ಪಲ್ಲ
ಪಂದ್ಯದ 11ನೇ ಓವರ್‌ನಲ್ಲಿ ಇಂಗ್ಲೆಂಡ್‌ ತಂಡದ ಜೇಸನ್‌ ರಾಯ್‌ ಗ್ಲವ್ಸ್‌ಗೆ ಚೆಂಡು ಸವರಿ ಹೋಗಿ ಧೋನಿ ಕೈ ಸೇರಿದ್ದರೂ, ಅವರಾರ‍ಯಕೆ ಡಿಆರ್‌ಎಸ್‌ ಮೊರೆ ಹೋಗಿಲ್ಲ ಎಂದು ಭಾರತದ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಪಂದ್ಯೋತ್ತರದ ಪತ್ರಿಕಾ ಗೋಷ್ಠಿಯಲ್ಲಿ ಇದಕ್ಕೆ ಉತ್ತರ ನೀಡಿದ ಟೀಮ್‌ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ ಡಿಆರ್‌ಎಸ್‌ ಮೊರೆ ಹೋಗುವುದು ಧೋನಿಯೊಬ್ಬರ ಕೆಲಸವಲ್ಲ. ಇಂಥ ಸಂದರ್ಭದಲ್ಲಿ ಚೆಂಡು ಬಡಿದಿರುವುದು ಕೆಲವರಿಗೆ ಗೊತ್ತಾದರೆ, ಕೆಲವರಿಗೆ ಗೊತ್ತಾಗಿರುವುದಿಲ್ಲ. ನಾಯಕ ಒತ್ತಡದಲ್ಲಿರುವ ಕಾರಣ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಯಿತು ಎಂದು ಹೇಳಿದ್ದಾರೆ.

Comments are closed.