ಕರ್ನಾಟಕ

ನಡುರೋಡಿನಲ್ಲಿ ಕೆಎಸ್​​ಆರ್​​​ಟಿಸಿ ಬಸ್ ಚಾಲಕರ ನಡುವೆ ಮಾರಾಮಾರಿ..!​​​

Pinterest LinkedIn Tumblr


ಕೊಪ್ಪಳ: ರಸ್ತೆ ಮಧ್ಯೆಯೇ ಕೆಎಸ್​​ಆರ್​​ಟಿಸಿ ಬಸ್​​ ನಿಲ್ಲಿಸಿ ಇಬ್ಬರು ಚಾಲಕರು ಬಡಿದಾಡಿಕೊಂಡಿರುವ ಘಟನೆಯೊಂದು ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿಂದು ಇಬ್ಬರು ಬಸ್​ ಚಾಲಕರು ಜಗಳ ಮಾಡಿಕೊಂಡು ಕೈಕೈ ಮೀಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಬಸ್ ಬಿಡುವ ವಿಚಾರವಾಗಿ ಗಲಾಟೆ ನಡೆದಿದ್ದು ಅರ್ಧ ಗಂಟೆ ರಸ್ತೆ ಮಧ್ಯೆ ಬಸ್​ ನಿಲ್ಲಿಸಿ ರಂಪಾಟ ಮಾಡಿದ್ದಾರೆ.

ಗಂಗಾವತಿ-ಹುಬ್ಬಳ್ಳಿ, ಹೈದ್ರಾಬಾದ್-ಕೊಪ್ಪಳ ಬಸ್ ಚಾಲಕರ ನಡುವೆ ಗಲಾಟೆ ನಡೆದಿದೆ. ಇವರಿಬ್ಬರ ಜಗಳಕ್ಕೆ ಪ್ರಯಾಣಿಕರ ಕಂಗಾಲಾಗಿದ್ದಾರೆ. ಸದ್ಯ ಇಬ್ಬರು ಚಾಲಕರು ಕೊಪ್ಪಳದಲ್ಲಿಯೇ ಬಸ್​ ನಿಲ್ಲಿಸಿ ಬಸ್​​ ಡಿಪೋ ಘಟಕಕ್ಕೆ ತೆರಳಿದ್ದಾರೆ.

Comments are closed.