
ಜೋಹಾನ್ಸ್ಬರ್ಗ್: ಉತ್ತಮ ಫಾರ್ಮ್ನಲ್ಲಿರುವ ಹೊರತಾಗಿಯೂ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಿಂದ ಬಲಗೈ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಡಲಾಗಿತ್ತು.
ಕೇಪ್ ಟೌನ್ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ನಿರ್ವಹಣೆ ನೀಡಿರುವ ಭುವಿ ಭಾರತಕ್ಕೆ ಗೆಲುವಿನ ಸನಿಹಕ್ಕೆ ತಲುಪಲು ನೆರವಾಗಿದ್ದರು. ಆದರೆ ಸೆಂಚುರಿಯನ್ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು.
ನಾಯಕ ವಿರಾಟ್ ಕೊಹ್ಲಿ ಇಂತಹದೊಂದು ನಿರ್ಧಾರ ಸಾಕಷ್ಟು ವಿಮರ್ಶೆಗಳಿಗೆ ಕಾರಣವಾಗಿತ್ತು. ಇದೀಗ ಮೂರನೇ ಟೆಸ್ಟ್ ಪಂದ್ಯ ಸಾಗುತ್ತಿರುವ ಜೋಹಾನ್ಸ್ಬರ್ಗ್ ಪಂದ್ಯದಲ್ಲಿ ಭುವಿ ಚೆಂಡಿನಿಂದಲೇ ತಮ್ಮ ವಿರುದ್ಧ ಎದುರಾದ ಟೀಕೆಗಳಿಗೆ ಉತ್ತರಿಸಿದ್ದಾರೆ.
ಮೊದಲು ಬ್ಯಾಟಿಂಗ್ನಲ್ಲಿ 30 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ ಭುವಿ ದಕ್ಷಿಣ ಆಫ್ರಿಕಾ ಓಪನರ್ಗಳನ್ನು ಪೆವಿಲಿಯನ್ಗೆ ಮರಳಿಸಿದ್ದರು. ಇಲ್ಲಿಗೆ ಭುವಿ ಪ್ರಭಾವಿ ದಾಳಿ ಮುಗಿಯಲಿಲ್ಲ.
ಸರಣಿಯುದ್ಧಕ್ಕೂ ಭಾರತವನ್ನು ಕಾಡಿರುವ ಅನುಭವಿ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಅವರ ವಿಕೆಟ್ ಉಡಾಯಿಸುವ ಮೂಲಕ ಭುವಿ ತಮ್ಮ ಗುಣಮಟ್ಟವನ್ನು ಮೆರೆದರು.
Comments are closed.