ರಾಷ್ಟ್ರೀಯ

ಹುಲಿ ಬಾಯಿಯಿಂದ ಸಹೋದರನ ರಕ್ಷಿಸಿದ ಸಾಹಸಿ

Pinterest LinkedIn Tumblr


ಕೋಲ್ಕತಾ: ಹುಲಿ ಬಾಯಿಗೆ ಸಿಲುಕಿದ್ದ ಸಹೋದರರನ್ನು ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾನೆ. ಕೋಲ್ಕತಾದ ಗೋಸಬಾ ಜಿಲ್ಲೆಯ ಛೋಟಮೊಲ್ಲಾಕಾಳಿ ಗ್ರಾಮದ ನಿವಾಸಿಗಳಾದ ದಿವಾಕರ್‌ ಮತ್ತು ದೇವವ್ರತ ಸರ್ಕಾರ್‌ ಏಡಿ ಹಿಡಿಯಲು ಸುಂದರಬನ ದಟ್ಟಾರಣ್ಯದ ಮಧ್ಯಕ್ಕೆ ಹೋಗಿದ್ದ ಸಂದರ್ಭ ಈ ಘಟನೆ ನಡೆದಿದೆ.

ಭಾನುವಾರ ಬೆಳಗ್ಗೆ ಕೋಲಾಕಾಳಿ ನದಿಗೆ ಏಡಿ ಹಿಡಿಯಲು ಸಹೋದರರಾದ ದಿವಾಕರ್‌ ಮತ್ತು ದೇವವ್ರತ ಇಬ್ಬರು ಗೋರ್‌ ಮಂಡಲ್‌ ಎಂಬ ಮೀನುಗಾರನ ಜತೆ ತೆರಳಿದ್ದ ಸಂದರ್ಭ ಹುಲಿ ದಾಳಿಗೆ ಒಳಗಾಗಿದ್ದಾರೆ. ಏಡಿ ಹಿಡಿಯುತ್ತಿದ್ದ ಸಂದರ್ಭ ಏಕಾಏಕಿ ಹುಲಿಯೊಂದು ಮೂವರ ಮೇಲೆ ದಾಳಿ ನಡೆಸಿದೆ. ದಾಳಿಗೆ ಬೆದರಿದ ದೇವವ್ರತ ಮತ್ತು ಗೌರ್‌ ನದಿಗೆ ಹಾರಿದ್ದಾರೆ. ಆದರೆ ದಿವಾಕರ್‌ ದೋಣಿಯಲ್ಲೇ ಕುಳಿತಿದ್ದಾನೆ. ನದಿಗೆ ಹಾರಿದ ದೇವವ್ರತ ಮತ್ತು ಗೌರ್‌ ಇಬ್ಬರನ್ನು ಬೆನ್ನಟ್ಟಿದ ಹುಲಿಯು ನದಿಗೆ ಹಾರಿದೆ. ಅದೃಷ್ಟದಿಂದ ಗೌರ್‌ ಪಾರಾಗುತ್ತಾನೆ. ಆದರೆ ದೇವವ್ರತ ಹುಲಿಯ ದಾಳಿಗೆ ಸಿಲುಕಿ ರಕ್ತಸಿಕ್ತಗೊಳ್ಳುತ್ತಾನೆ.

ತಕ್ಷಣ ಸಹೋದರನ ರಕ್ಷಣೆಗೆ ಮುಂದಾದ ದಿವಾಕರ್‌, ದೋಣಿಯಲ್ಲೇ ಸಿಕ್ಕಿದ ಹಲಗೆಯೊಂದನ್ನು ಹಿಡಿದು ನದಿಗೆ ಹಾರಿ ಹುಲಿ ಮೇಲೆ ಪ್ರಹಾರ ಮಾಡುತ್ತಾನೆ. ದಿವಾಕರ ಏಟಿಗೆ ಹೆದರಿದ ಹುಲಿ ಓಡಿ ಹೋಗುತ್ತದೆ.

ನಂತರ ಹುಲಿ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಸಹೋದರನನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವವ್ರತ ಚೇತರಿಸಿಕೊಳ್ಳುತ್ತಿದ್ದಾನೆ.

Comments are closed.