ಕರಾವಳಿ

ಸಿಎಂ ರಿಂದ ಉಗ್ರಗಾಮಿ ಹೇಳಿಕೆ: ಬಿಜೆಪಿ ಪ್ರತಿಭಟನೆ- ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ, ಬಂಧನ

Pinterest LinkedIn Tumblr

ಉಡುಪಿ: ಆರ್.ಎಸ್.ಎಸ್ ಹಾಗೂ ಬಿಜೆಪಿ‌ ಕಾರ್ಯಕರ್ತರನ್ನು ಉಗ್ರರೆಂದು ಕರೆದಿರುವ ಸಿಎಂ‌ ಸಿದ್ದರಾಮಯ್ಯ ವಿರುದ್ದ ಉಡುಪಿಯಲ್ಲಿ‌ ಬಿಜೆಪಿ‌ ಕಾರ್ಯಕರ್ತರು ಪ್ರತಿಭಟನೆ‌ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರತ್ನಿಸಿದ ಬಿಜೆಪಿ‌ ಕಾರ್ಯಕರ್ತರ ಬಂಧಿಸಲಾಯಿತು.

ಉಡುಪಿಯ ಬ್ರಹ್ಮಗಿರಿ ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ನಾವು ಬಿಜೆಪಿ‌ ಕಾರ್ಯಕರ್ತರು ನಮ್ಮನ್ನ ಬಂಧಿಸಿ ಎಂದು‌ ಘೋಷಣೆಯನ್ನ‌ ಕೂಗಿಕೊಂಡು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂಧರ್ಭದಲ್ಲಿ‌ ಪೊಲೀಸರು ಬಿಜೆಪಿ‌ ಕಾರ್ಯಕರ್ತರನ್ನ‌ ಬಂಧಿಸಿದರು.

Comments are closed.