ರಾಷ್ಟ್ರೀಯ

ವಿಧವೆ ಅತ್ತಿಗೆ ಜತೆ ಬಲವಂತವಾಗಿ ಮದುವೆ ಮಾಡಿದ್ದಕ್ಕಾಗಿ 15 ವರ್ಷದ ಬಾಲಕ ಮಾಡಿಕೊಂಡಿದ್ದು ಘನಘೋರ ಕೆಲಸ !

Pinterest LinkedIn Tumblr

ಗಯಾ: ವಿಧವೆ ಅತ್ತಿಗೆ ಜತೆ ಬಲವಂತವಾಗಿ ಮದುವೆ ಮಾಡಿದ್ದಕ್ಕೆ ಮನನೊಂದು 15 ವರ್ಷದ ಅಪ್ರಾಪ್ತ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಿಹಾರದ ಗಯಾ ಜಿಲ್ಲೆಯ ರಾಮನ್ ವಿನೋಬಾನಗರ್ ಗ್ರಾಮದಲ್ಲಿ ಬಾಲಕ ಮಹಾದೇವ್ ಗೆ ಮೃತ ಅಣ್ಣನ ಹೆಂಡತಿ ಜತೆ ಬಲವಂತವಾಗಿ ಮದುವೆ ಮಾಡಲಾಗಿತ್ತು. ಇದರಿಂದ ನೊಂದ ಆತ ಕೆಲ ಗಂಟೆಗಳಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಹಾದೇವ್ ಅಣ್ಣ ಸತೀಶ್ ದಾಸ್ ಗೆ 2009ರಲ್ಲಿ ರೂಬಿದೇವಿ ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಎಲೆಕ್ಟ್ರಿಷಿಯನ್ ಕೆಲಸದಲ್ಲಿದ್ದ ಸತೀಶ್ ದಾಸ್ 2013ರಲ್ಲಿ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದರು. ಸತೀಶ್ ಸಾವಿನ ಬಳಿಕ ಆತನ ಕುಟುಂಬಕ್ಕೆ 80 ಸಾವಿರ ರುಪಾಯಿ ಪರಿಹಾರ ಧನ ಸಿಕ್ಕಿತ್ತು. ಈ ಹಣ ಸತೀಶ್ ಹೆಂಡತಿಗೆ ಸೇರಬೇಕು ಎಂದು ರೂಬಿದೇವಿ ಪೋಷಕರು ಪಟ್ಟುಹಿಡಿದರು. ಈ ಹಣದ ಆಸೆಗಾಗಿ ಸತೀಶ್ ತಂದೆ ಚಂದ್ರಶೇಖರ್ ದಾಸ್ ತಮ್ಮ ಎರಡನೇ ಮಗನಿಗೆ ಸೊಸೆಯನ್ನು ಕೊಟ್ಟು ಮದುವೆ ಮಾಡಿ ಈಗ ಎರಡನೇ ಮಗನ ನ್ನು ಕಳೆದುಕೊಂಡಿದ್ದಾರೆ.

ಮಹಾದೇವ್ ಆತ್ಮಹತ್ಯೆ ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಾದೇವ್ ತಂದೆ ಚಂದ್ರಶೇಖರ್, ತಾಯಿ, ರೂಬಿದೇವಿ ಸೇರಿದಂತೆ ಮೂವರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.