ರಾಷ್ಟ್ರೀಯ

ಭಿಕ್ಷುಕರ ಬಟ್ಟೆ ಒಣಗಿಸುವ ತಾಣವಾದ ಯುದ್ಧ ಟ್ಯಾಂಕರ್‌

Pinterest LinkedIn Tumblr


ಅಹ್ಮದಾಬಾದ್‌: 2008ರಲ್ಲಿ ಭಾರತೀಯ ಸೇನೆಯಿಂದ ಹೊರ ಬಂದ ವಿಜಯಾಂತ ಬಿಜಲಿ ಯುದ್ಧ ಟ್ಯಾಂಕರ್‌ನ ಸ್ಥಿತಿ ಶೋಚನೀಯವಾಗಿದೆ. ದೇಶದ ಮೂರನೇ ಸ್ವಚ್ಛ ರೈಲು ನಿಲ್ದಾಣ ಎಂದು ಖ್ಯಾತಿ ಪಡೆದಿರುವ ಅಹ್ಮದ್‌ನಗರ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಯುದ್ಧ ಭೂಮಿಯಿಂದ ಹೊರಬಂದ ವಿಜಯಾಂತ ಬಿಜಲಿ ಟ್ಯಾಂಕರ್‌ನ್ನು ಸಾರ್ವಜನಿಕರ ವೀಕ್ಷಣೆಗೆ ಅಹ್ಮದ್‌ ನಗರದ ರೈಲ್ವೇ ನಿಲ್ದಾಣದ ಬಳಿ ಪ್ರದರ್ಶನಕ್ಕೆ ಇಡಲಾಗಿದೆ. ಆದರೆ ಇದೀಗ ಇಲ್ಲಿ ಉಳಿದಿರುವ ಖಾಲಿ ಜಾಗವನ್ನು ಭಿಕ್ಷುಕರು ಆಕ್ರಮಿಸಿಕೊಂಡಿದ್ದು ಟ್ಯಾಂಕ್‌ನ ಗನ್‌ ಮೇಲೆ ಬಟ್ಟೆಯನ್ನು ಒಣಗಿಸಲು ಬಳಸಿಕೊಳ್ಳುತ್ತಿದ್ದಾರೆ.

ಸ್ಥಳೀಯ ಆಡಳಿತಾಧಿಕಾರಿ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಯುದ್ಧ ಟ್ಯಾಂಕರ್‌ನನ್ನು ನೋಡಲು ಯಾರೂ ಬರುತ್ತಿಲ್ಲ, ವಿಪರ್ಯಾಸವೆಂದರೆ ಕೆಲ ಸಂದರ್ಭದಲ್ಲಿ ಈ ಟ್ಯಾಂಕ್‌ ಅನ್ನು ಬಟ್ಟೆ ಒಣಗಿಸಲು ಬಳಸಲಾಗುತ್ತಿದೆ. ಕೆಲವರು ಬಟ್ಟೆಯನ್ನು ಟ್ಯಾಂಕ್‌ ಮೇಲೂ ಹಾಕುತ್ತಾರೆ. ಇಲಾಖೆ ಮಾತ್ರ ಯಾವುದೇ ಕ್ರಮ ಕೈಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಅಹ್ಮದ್‌ನಗರ ನಿವಾಸಿಗಳು ಈ ಕುರಿತು ಈಗಾಗಲೇ ಸರಕಾರದ ಗಮನಕ್ಕೆ ಪ್ರಕರಣವನ್ನು ತಂದಿದ್ದರೂ ಮಹಾರಾಷ್ಟ್ರ ಸರಕಾರ ಯಾವುದೇ ಕ್ರಮ ಕೈಕೊಂಡಿಲ್ಲ. ಹೀಗೆಯೇ ಮುಂದುವರಿದರೆ ಈ ವಿಚಾರವನ್ನು ರಕ್ಷಣಾ ಸಚಿವರ ಗಮನಕ್ಕೆ ತರುತ್ತೇವೆ ಎಂದು ನಿವಾಸಿ ಸುಹಾಸ್‌ ಮುಲ್ಯೆ ಹೇಳಿದ್ದಾರೆ.

Comments are closed.