ಕರ್ನಾಟಕ

ಸಚಿವ ಯು.ಟಿ.ಖಾದರ್ ಟ್ರಾಫಿಕ್ ಪೊಲೀಸ್!

Pinterest LinkedIn Tumblr


ಬೆಳಗಾವಿ(ಜ.28): ಆಹಾರ ಸಚಿವ ಯುಟಿ ಖಾದರ್ ನಿನ್ನೆ ಟ್ರಾಫಿಕ್​ ಪೊಲೀಸ್​ ಆಗಿದ್ದರು! ಅಚ್ಚರಿಯಾದರೂ ಇದು ನಿಜ. ನಿನ್ನೆ ಧಾರವಾಡದಲ್ಲಿ ಕಾರ್ಯಕ್ರಮ ಮುಗಿಸಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ಹೊರಡುವಾಗ ಟ್ರಾಫಿಕ್ ಜಾಮ್ ಆಗಿತ್ತು.

ಕೊನೆಗೆ ಸಚಿವರೇ ತಮ್ಮ ಕಾರಿಂದ ಇಳಿದು ಟ್ರಾಫಿಕ್​ ಜಾಮ್​ ಕ್ಲಿಯರ್​ ಮಾಡಲು ಮುಂದಾದರು. ಆದರೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿಲ್ಲ . ಕೊನೆಗೆ ವಿಮಾನ ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ ಅಪರಿಚಿತರ ವಾಹನದಲ್ಲಿ ಸಚಿವರು ಲಿಫ್ಟ್​ ತೆಗೆದುಕೊಂಡರು.

Comments are closed.