
ಚೆನ್ನೈ: ಚಲಿಸುವ ರೈಲಿನಲ್ಲಿ ಇಡೀ ಸಿನೆಮಾ ಚಿತ್ರಣವಾಗಿರುವ ಧನುಷ್ ನಟನೆಯ ತಮಿಳು ಸಿನೆಮಾ ‘ತೊಡರಿ’ ಕರ್ನಾಟಕವನ್ನು ಹೊರತುಪಡಿಸಿ ಬೇರೆಲ್ಲ ಬಿಡುಗಡೆಯಾಗಲಿದೆ. ಕಾವೇರಿ ವಿವಾದ ತೀವ್ರವಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತದಲ್ಲಿ ಉಳಿದೆಡೆ ಗುರುವಾರ ಚಿತ್ರಮಂದಿರಗಳಲ್ಲಿ ‘ತೊಡರಿ’ ಬಿಡುಗಡೆಯಾಗಲಿದೆ.
“ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಕಾವೇರಿ ವಿವಾದ ‘ತೊಡರಿ’ ಬಿಡುಗಡೆಗೆ ಅಡ್ಡಿಪಡಿಸಿದೆ. ಆದುದರಿಂದ ಇದು ನಮಗೆ ನಷ್ಟ ತರವುದಿದ್ದರು, ಸದ್ಯಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದೇವೆ” ಎಂದು ಕರ್ನಾಟಕ ಭಾಗದ ಈ ಸಿನೆಮಾ ವಿತರಕ ಮಂಜುನಾಥ್ ಹೇಳಿದ್ದಾರೆ.
ಪ್ರಭು ಸೋಲೋಮಾನ್ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ರೈಲ್ವೆ ಪ್ಯಾಂಟ್ರಿ ಕೆಲಸಗಾರನಾಗಿ ಕಾಣಿಸಿಕೊಂಡರೆ ಕೀರ್ತಿ ಸುರೇಶ ಮೇಕ್ ಅಪ್ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.
ಚೆನ್ನೈ-ದೆಹಲಿ ನಡುವಿನ ರೈಲಿನಲ್ಲಿ ಈ ಸಿನೆಮಾ ಚಿತ್ರೀಕರಣಗೊಂಡಿದ್ದು, ಚಲಿಸುವ ರೈಲಿನ ಮೇಲೆ ಆಕ್ಷನ್ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.
ಕಳೆದ ತಿಂಗಳು ವಿಕ್ರಮ್ ನಟನೆಯ ‘ಇರುಮುಗನ್’ ಕೂಡ ಕರ್ನಾಟಕದಲ್ಲಿ ಬಿಡುಗಡೆಯಾಗಿರಲಿಲ್ಲ.
Comments are closed.