ರಾಷ್ಟ್ರೀಯ

ಎಂಜಿಆರ್ ಸಂಬಂಧಿ ಕೊಲೆ ಕೇಸ್: ಎಲ್ಲಾ 7 ಆರೋಪಿಗಳು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು

Pinterest LinkedIn Tumblr

crimeಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರ ಅವರ ಸಾಕುಮಗಳ ಪತಿ ವಿಜಯನ್ ಅಲಿಯಾಸ್ ವಿಜಯಕುಮಾರ್ ಅವರ ಕೊಲೆ ಪ್ರಕರಣ ಎಲ್ಲಾ ಏಳು ಆರೋಪಿಗಳು ತಪ್ಪಿತಸ್ಥರು ಎಂದು ಬುಧವಾರ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಇಂದು ಅಂತಿಮ ತೀರ್ಪು ಪ್ರಕಟಿಸಿದ್ದು, ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.

ಜೂನ್ 4, 2008ರಲ್ಲಿ ವಿಜಯನ್ ಅಲಿಯಾಸ್ ವಿಜಯಕುಮಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಸುಮಾರು 8 ವರ್ಷಗಳ ವಿಚಾರಣೆ ನಂತರ ಸೆಷೆನ್ಸ್ ಕೋರ್ಟ್ ನ್ಯಾಯಾಧೀಶ ಜಿ ಜಯಚಂದ್ರನ್ ಅವರು ಎಲ್ಲಾ ಏಳು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ.

ಪ್ರಮುಖ ಆರೋಪಿ ವಿಜಯನ್ ಅವರ ಸೊಸೆ ಎನ್.ಬಾನು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಎಂಜಿಆರ್ ಸಂಬಂಧಿಯನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Comments are closed.