ಕರಾವಳಿ

ಕಾರು ಅಪಘಾತ : ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು.

Pinterest LinkedIn Tumblr

tanrubavi_car_accdent_1

ಮಂಗಳೂರು, ಜೂ.30: ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದಲ್ಲಿದ್ದ ಪೊದೆಗೆ ನುಗ್ಗಿದ ಘಟನೆ ತಣ್ಣೀರುಬಾವಿ ಬಳಿ ಇಂದು ಮುಂಜಾನೆ ನಡೆದಿದೆ.

ಕಾರು ಪುಟ್‌ಪಾತ್‌ಗೆ ಢಿಕ್ಕಿ ಹೊಡೆದು ಪಕ್ಕದಲ್ಲಿದ್ದ ಪೊದೆಯೊಂದರಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಕಾರಿನಲ್ಲಿದ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

tanrubavi_car_accdent_2 tanrubavi_car_accdent_3 tanrubavi_car_accdent_4 tanrubavi_car_accdent_5 tanrubavi_car_accdent_6

ಘಟನೆ ವಿವರ :
ದೆಹಲಿ ನೊಂದಣಿಯ ಈ ಕಾರು ತೆಂಗಿನ ಕಾಯಿ ಹೊತ್ತು ಬರುತ್ತಿದ ಗಾಡಿಯನ್ನು ಹಿಂದಕ್ಕೆ ಹಾಕುವ ರಭಸಕ್ಕೆ ಅತೀವೇಗ ಕಾರು ಚಲಾಯಿಸಿದ್ದೇ ಈ ದುರ್ಘಟನೆ ನಡೆಯಲು ಕಾರಣ ಎಂದು ತೆಂಗಿನಕಾಯಿ ವ್ಯಾಪಾರಿ ತಿಳಿಸಿದ್ದಾರೆ.

Comments are closed.