ಕೊಚ್ಚಿ (ಪಿಟಿಐ): ಸೋಲಾರ್ ಹಗರಣದ ಪ್ರಮುಖ ಆರೋಪಿ ಸರೀತಾ ಎಸ್.ನಾಯರ್ ಅವರ ವಿರುದ್ಧ ಸೋಲಾರ್ ಆಯೋಗವು ಬಂಧನ ರಹಿತ ವಾರಂಟ್ ಜಾರಿ ಮಾಡಿದೆ.
ಜೂನ್ 27ರ ಒಳಗೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಆಯೋಗವು ಹೆಳಿದೆ.
ವಿಚಾರಣೆಗೆ ಹಾಜರಾಗುವಂತೆ ಆಯೋಗವು ಸರೀತಾ ಅವರಿಗೆ ನೋಟಿಸ್ ನೀಡಿತ್ತು. ಆದರೆ ಅವರು ನಾಲ್ಕು ಬಾರಿಯೂ ಸೂಕ್ತವಲ್ಲದ ಕಾರಣಗಳನ್ನು ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ.
Comments are closed.