ಮೈಸೂರು: ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕಾಗಿ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸಚಿವ ಸಂಪುಟದಿಂದ ಗೇಟ್ ಪಾಸ್ ನೀಡಿರುವ ಬಗ್ಗೆ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್ ಅವರು, “ಇದು ಯಾರ ವಿವೇಚನೆಗೆ ಬಿಟ್ಟಿದ್ದೋ ಅದನ್ನು ಅವರು ಯೋಚನೆ ಮಾಡಬೇಕಿತ್ತು. ಮೂರು ವರ್ಷಗಳಲ್ಲಿ ಯಾರು ಏನು ಮಾಡಿದ್ದಾರೆ? ಅವರ ಮೇಲೆ ಆಪಾದನೆಗಳಿದೆಯೆ? ಅವರ ಕಾರ್ಯ ವೈಖರಿ ಹೇಗಿದೆ? ಅವರ ಬಗ್ಗೆ ಜನಾಭಿಪ್ರಾಯವೇನು?
ತೀರ್ಮಾನ ತೆಗೆದು ಕೊಳ್ಳುವ ಮುನ್ನ ಒಬ್ಬ ಮುಖ್ಯಮಂತ್ರಿ ಇದನ್ನೆಲ್ಲಾ ಯೋಚಿಸಬೇಕಿತ್ತು, ಆದರೆ ಅವರು ಇದನ್ನು ಮಾಡಿಲ್ಲ. ಇದನ್ನು ಮಾಡಲು ಅವರು ವಿಫಲರಾಗಿದ್ದಾರೆ ಎಂದು ನಾನು ಹೇಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ
ಕರ್ನಾಟಕ
Comments are closed.