ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್
ಮುಂಬಯಿ: ಇಲ್ಲಿನ ಬೊರಿವಿಲಿ ಪಶ್ಚಿಮದ ಜಯರಾಜ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಾಂಗಣದಲ್ಲಿ ಜು. 18ರಂದು ಮೊಗವೀರ ಸಮಾಜದ ಬೃಹತ್ ಸಭೆಯನ್ನು ಆಯೋಜಿಸಲಾಗಿತ್ತು.
ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಮೊಗವೀರ ಯುವಕ ಸಂಘದ ಅಧ್ಯಕ್ಷ ಸದಾನಂದ ಕೋಟ್ಯಾನ್ ಅವರು, ಮೊಗವೀರ ಸಮಾಜದ ಏಳ್ಗೆಗಾಗಿ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ದೇಶ-ವಿದೇಶದ ಮೊಗವೀರ ಸಂಘಟನೆಗಳು ಮೊಗವೀರರ ಏಕತೆ, ಏಳ್ಗೆಗಾಗಿ ಶ್ರಮಿಸಿದೆ. ಈ ನಿಟ್ಟಿನಲ್ಲಿ ಮೊಗವೀರ ಬ್ಯಾಂಕಿನ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಮೊಗವೀರ ಮಂಡಳಿ ಯುನೈಟೆಡ್ ಪ್ಯಾನೆಲ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸಮಾಜದ ಒಳಿತಿಗಾಗಿ ಸಂಘಟಿತರಾಗೋಣ ಎಂದು ನುಡಿದರು.
ಅಭ್ಯರ್ಥಿಗಳಾದ ಗೋಪಾಲ್ ಎಸ್. ಪುತ್ರನ್, ಶೀಲಾ ಅಮೀನ್, ಧರ್ಮಪಾಲ ಪಿ., ಡಿ. ಡಿ. ಕರ್ಕೇರ, ಜನಾರ್ದನ ಮೂಲ್ಕಿ, ಸಮಾಜ ಸೇವಕರಾದ ಸಂತೋಷ್ ಪುತ್ರನ್, ಸಂಜೀವ ಸಾಲ್ಯಾನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಸಂಜೀವ ಸಾಲ್ಯಾನ್ ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಸಂಘಟಕ ಶಿವರಾಮ್ ಅಮೀನ್, ಲಕ್ಷ್ಮಣ್ ಶ್ರೀಯಾನ್, ಪ್ರಭಾಕರ ಅಂಚನ್, ಕಮಲಾಕ್ಷ ಪುತ್ರನ್, ಜಗಮೋಹನ್ ಕುಂದರ್ ಅವರು ಸಹಕರಿಸಿದರು. ಬೃಹತ್ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.