ಬಾಲಿವುಡ್ ಸಿನೆಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ 17 ವರ್ಷದ ಯುವತಿಯನ್ನು ರೆಸಾರ್ಟ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ವಾಣಿಜ್ಯ ನಗರಿ ಮುಂಬೈ ನಲ್ಲಿ ನಡೆದಿದೆ.
ನೆರೆಮನೆಯ ಸಾಮ್ರಾಟ್ ತಾಂಬೆ ಎಂಬಾತನಲ್ಲಿ ಈ ಯುವತಿ ಸಿನಿಮಾ ನಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಈ ಅವಕಾಶವನ್ನು ಬಳಸಿಕೊಂಡ ತಾಂಬೆ ತನ್ನ ಸ್ನೇಹಿತ ಅಬ್ಬಾಸ್ ಪಟ್ರಾವಾಲಾಗೆ ನಿರ್ದೇಶಕರ ಪರಿಚಯವಿದ್ದು ಮನೋರಿ ರಿಸಾರ್ಟ್ಗೆ ಬನ್ನಿ ಚಿತ್ರ ನಿರ್ದೇಶಕರನ್ನು ಭೇಟಿ ಮಾಡಿಸುತ್ತೇನೆ ಎಂದು ತಿಳಿಸಿದ್ದಾನೆ.
ಆತನ ಮಾತನ್ನು ನಂಬಿ ರೆಸಾರ್ಟ್ ಗೆ ಹೋದ ಆಕೆಗೆ ಮದ್ಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಯುವತಿಗೆ ಕುಡಿಯಲು ನೀಡಿ ನಂತರ ಈ ಇಬ್ಬರೂ ಸ್ನೇಹಿತರು ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ತಮ್ಮ ಈ ಹೀನ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದು ಯಾರಿಗಾದರೂ ಈ ವಿಷಯ ಬಾಯ್ಬಿಟ್ಟಲ್ಲಿ ಇಂಟರ್ ನೆಟ್ ನಲ್ಲಿ ಹರಿಬಿಡುತ್ತೇವೆ ಎಂದು ಬೆದರಿಸಿದ್ದಾರೆ.
ಮನೆಗೆ ಬಂದ ಯುವತಿ ತನ್ನ ಮೇಲೆ ನಡೆದಿರುವ ಈ ಕ್ರೌರ್ಯವನ್ನು ತಂದೆ ತಾಯಿಗೆ ಹೇಳಿದ್ದು ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.