ಕುಂದಾಪುರ: ಇತ್ತೀಚೆಗೆ ವಿಸ್ತರಣೆಗೊಂಡ ಬೆಂಗಳೂರು-ಮೈಸೂರು-ಮುರುಡೇಶ್ವರ (16585) ಮಂಗಳೂರಿಗೆ 8.15 ಕ್ಕೆ ಪ್ರವೇಶಿಸಿ 11 ಘಂಟೆಗೆ ಸುರತ್ಕಲ್ ಬರುವ ರೈಲಿನ ಅವೈಜ್ಞಾನಿಕ ವೇಳಾಪಟ್ಟಿ ಬಗ್ಗೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಂಗಳೂರಿನಿಂದ ಸುರತ್ಕಲ್ ನ ಬರೇ 20 ಕಿ.ಮಿ ವ್ಯಾಪ್ತಿಯ ಅಂತರಕ್ಕೆ 3.30 ಗಂಟೆ ಅವಧಿ ತೆಗೆದುಕೊಂಡು ಕೇರಳ ಲಾಬಿ ಅಥವಾ ಸ್ಥಾಪಿತ ಹಿತಾಸಕ್ತಿಗೆ ದಕ್ಷಿಣ ರೈಲ್ವೆ ಯವರು ಮಣಿದಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದವರು ದೂರಿದ್ದಾರೆ.
ಈ ರೈಲನ್ನು ಸರಿಯಾದ ವೇಳಾ ಪಟ್ಟಿ ತಯಾರಿಸಿ ಕರ್ನಾಟಕ ಕರಾವಳಿ ಭಾಗದಲ್ಲಿ ಹೊರಡಿಸಿದರೆ ಈ ರೈಲನ್ನು ಗೋಕರ್ಣ, ಕಾರವಾರ ದ ವರೆಗೂ ವಿಸ್ತರಿಸಬಹುದು ಎನ್ನುವದು ತಜ್ಞರ ಅಭಿಪ್ರಾಯವಾಗಿದೆ. ಮೈಸೂರು, ಉಡುಪಿ, ಆನೆಗುಡ್ಡೆ, ಹಟ್ಟಿಅಂಗಡಿ ವಿನಾಯಕ, ಕೊಲ್ಲೂರು, ಇಡಗುಂಜಿ, ಗೋಕರ್ಣ ಕ್ಕೆ ಅನುಕೂಲವಾಗುವ ವೇಳಾ ಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಉಳಿದ ರೈಲುಗಳ ಸಂಚಾರದ ಅವಧಿಯಷ್ಟೇ (45 ನಿಮಿಷ ಮಂಗಳೂರು ನಿಂದ ಸುರತ್ಕಲ್ ) ಈ ರೈಲಿಗೂ ಅನ್ವಯ ಆಗುವ ವೇಳಾಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಎಂದು ಅಧ್ಯಕ್ಷ ಗಣೇಶ್ ಪುತ್ರನ್ ಅಗ್ರಹಿಸಿದ್ದಾರೆ ಎಂದು ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ಸಗಂದಾ ಎಕ್ಸ್ ಪ್ರೆಸ್ ಮಂಗಳೂರಿನಿಂದ ಕುಂದಾಪುರಕ್ಕೆ ಬರಲು ಎರಡು ಘಂಟೆ ಸಾಕಾದರೆ
ಅಷ್ಟೇ ನಿಲುಗಡೆ ಇರುವ ಈ ರೈಲಿಗೆ ಮಾತ್ರ 3 ಘಂಟೆ ಯಾಕೆ.? ನೈರುತ್ಯ ರೈಲ್ವೆಯವರಿಂದ ಮೊದಲಿಗಿಂತಲೂ ಅರ್ದ ಘಂಟೆ ಬೇಗನೆ ರೈಲನ್ನು ಪಡೆದು
ಕೊಂಕಣ ರೈಲ್ವೇಗೆ ಮಾತ್ರ ವಿಳಂಭವಾಗಿ ರೈಲನ್ನು ಹಸ್ತಾಂತರಿಸುವ ದಕ್ಷಿಣ ರೈಲ್ವೆಯ ಕ್ರಮ ಸಂಶಾಯಸ್ಪದವಾಗಿದೆ. ಪ್ರತೀ ದಿನ ರೈಲು ಜೋಕಟ್ಟೆ, ತೋಕೂರು ಸುರತ್ಕಲ್ ನಿಲ್ದಾಣಕ್ಜೆ ಮೂವತ್ತರಿಂದ ನಲವತ್ತು ನಿಮಿಷ ಬೇಗನೆ ಬಂದು ನಿಲ್ಲುವ ಬದಲು 9.30 ಕ್ಕೆ ಕೊಂಕಣ ರೈಲ್ಬೆಗೆ ಹಸ್ತಾಂತರ ಮಾಡಿದರೆ ಉಡುಪಿ ಕುಂದಾಪುರ ಒಂದು ಗಂಟೆ ಬೇಗ ತಲುಪಬಹುದಾಗಿದೆ.
– ಗಣೇಶ್ ಪುತ್ರನ್ (ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ
Comments are closed.