ಕರ್ನಾಟಕ

ಕೊರೊನಾ: ರಾಜ್ಯದ 25 ಸಾವಿರ ವೈದ್ಯರಿಗೆ ಆನ್‌ಲೈನ್‌ ತರಬೇತಿ!

Pinterest LinkedIn Tumblr


ಬೆಂಗಳೂರು: ಕೊರೊನಾದಿಂದ ಮುಂದೆ ಎದುರಾಗುವ ಅಪಾಯದಿಂದ ಪಾರಾಗಲು ಸರ್ವ ರೀತಿಯಲ್ಲೂ ಸನ್ನದ್ಧಗೊಳ್ಳುವ ದೃಷ್ಟಿಯಿಂದ ವೈದ್ಯರಿಗೆ ಆನ್‌ಲೈನ್‌ ಮೂಲಕ ತರಬೇತಿ ಪ್ರಾರಂಭಿಸಲಾಗಿದೆ.

ರಾಜ್ಯದಲ್ಲಿ 25 ಸಾವಿರ ವೈದ್ಯರಿಗೆ ಈ ವಿಧಾನದಡಿ ತರಬೇತಿ ನೀಡಲಾಗುತ್ತದೆ. ಹಾಗೆಯೇ 1 ಸಾವಿರ ಅರೆ ವೈದ್ಯ ಸಿಬ್ಬಂದಿಗೂ ಇದರಡಿ ತರಬೇತಿ ಕೊಡಲಾಗುತ್ತದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಇನ್ನು 15 ದಿನಗಳ ಕಾಲ ಕಟ್ಟೆಚ್ಚರದಿಂದ ಇರಬೇಕಾಗುತ್ತದೆ. ಹಾಗಾಗಿ ಚಿಕಿತ್ಸೆ ವಿಚಾರದಲ್ಲೂವೈದ್ಯರಲ್ಲೂನಿಖರತೆ ಇರಬೇಕು ಎಂಬ ಉದ್ದೇಶದಿಂದ ತರಬೇತಿಯ ವ್ಯವಸ್ಥೆ ಮಾಡಲಾಗಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಈ ತರಬೇತಿಯ ಏರ್ಪಾಡು ಮಾಡಿದ್ದು, ನಿಮ್ಹಾನ್ಸ್‌ ಸಂಸ್ಥೆಯ ಡಿಜಿಟಲ್‌ ಅಕಾಡೆಮಿ ಕೈಜೋಡಿಸಿದೆ. ನಿಮ್ಹಾನ್ಸ್‌ ಸಂಸ್ಥೆಯಲ್ಲಿತಜ್ಞರ ನೆರವಿನೊಂದಿಗೆ ಈ ತರಬೇತಿ ಸೋಮವಾರ ಆರಂಭವಾಗಿದೆ. 300 ವೈದ್ಯರು ಈಗಾಗಲೇ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಬಹಳ ಕೊರೊನಾ ವಿರುದ್ಧ ಸಮರ್ಥ ಹೋರಾಟ ನಡೆಸಲು ಇಂತಹ ಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕವಾಗಿದೆ.

ಏಕರೂಪ ಚಿಕಿತ್ಸೆ
ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಆರೋಗ್ಯ ಸಚಿವಾಲಯಗಳ ಮಾರ್ಗಸೂಚಿ ಅನುಸಾರ ಕೋವಿಡ್‌-19 ಸೋಂಕು ತಗುಲಿದವರಿಗೆ ಏಕರೂಪ ಚಿಕಿತ್ಸೆ ನೀಡಬೇಕಾಗುತ್ತದೆ. ಈ ವಿಚಾರದಲ್ಲಿವೈದ್ಯ ಸಮೂಹದಲ್ಲೂಯಾವುದೇ ರೀತಿಯ ಗೊಂದಲ ಇರಬಾರದು. ಈ ದೃಷ್ಟಿಯಿಂದ ಆನ್‌ಲೈನ್‌ ತರಬೇತಿ ಮಹತ್ವದ್ದೆನಿಸಿದೆ. ಈ ಉದ್ದೇಶದಿಂದ ತರಬೇತಿ ನಡೆಸಿ ಕೊಡಲಾಗುತ್ತಿದೆ ಎಂದು ಮಾತನಾಡಿದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದರು.

ತರಬೇತಿ ನೀಡ್ತಿರೋದು ಏಕೆ?
ಏಪ್ರಿಲ್‌ ಮೊದಲ ಹಾಗೂ ಎರಡನೇ ವಾರ ಹೆಚ್ಚು ನಿಗಾ ವಹಿಸಬೇಕಾಗುತ್ತದೆ. ಈ ಸಂಬಂಧ ಸರ್ವ ಸಿದ್ಧತೆ ಅಗತ್ಯ. ವೈದ್ಯರನ್ನೂ ಸಜ್ಜುಗೊಳಿಸಬೇಕಾಗುತ್ತದೆ. ಎಲ್ಲರೂ ಮಾರ್ಗಸೂಚಿ ಅನುಸಾರ ನಿರ್ದಿಷ್ಟ ಚಿಕಿತ್ಸೆ ನೀಡಬೇಕಾಗುತ್ತದೆ. ಇದನ್ನು ವೈದ್ಯರಿಗೆ ಮನದಟ್ಟು ಮಾಡಲಾಗುತ್ತದೆ.

ಕೋವಿಡ್‌-19ರ ವಿರುದ್ಧದ ಹೋರಾಟಕ್ಕೆ ವೈದ್ಯರನ್ನು ಎ, ಬಿ, ಸಿ, ಡಿ, ಇ, ಎಫ್‌ ಎಂಬ ವಿಭಾಗದಡಿ ವಿಂಗಡಿಸಿಕೊಳ್ಳಲಾಗಿದೆ. ಇವರಲ್ಲಿಎ ವಿಭಾಗದಲ್ಲಿಬರುವವರು ಚಿಕಿತ್ಸೆ ನೀಡುವವರಾಗಿರುತ್ತಾರೆ. ಬಿ ವಿಭಾಗದಲ್ಲಿಸರ್ಜನ್‌, ನೆಪ್ರೊಲಾಜಿ, ನ್ಯೂರೋಲಾಜಿಗಳಿರುತ್ತಾರೆ. ಚಿಕಿತ್ಸೆಯಲ್ಲಿಇಂಥವರ ಪಾತ್ರವೂ ಮುಖ್ಯ. ಉಳಿದ ವಿಭಾಗದಡಿ ಬರುವವರ ಸಹಕಾರವೂ ಮುಖ್ಯ. ಇಂತಹ ಎಲ್ಲರಿಗೂ ಚಿಕಿತ್ಸಾ ವಿಧಾನದ ಸ್ಪಷ್ಟ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ಸಚ್ಚಿದಾನಂದ ಅವರು ಮಾಹಿತಿ ನೀಡಿದ್ದಾರೆ.

“ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ಇದು ಉತ್ತಮ ಕ್ರಮ. ವೈದ್ಯರಿಗೆ ಮಾಸ್ಕ್‌ ಸೇರಿದಂತೆ ರಕ್ಷಣಾ ಸಾಮಗ್ರಿ ಒದಗಿಸಲಾಗುವುದು. ಪಿಎಚ್‌ಸಿ ಮಟ್ಟದ ವೈದ್ಯರಿಗೂ ಸಂಪೂರ್ಣ ಸಹಕಾರ ನೀಡಲಾಗುವುದು.”
-ಡಾ. ಕೆ. ಸುಧಾಕರ್‌, ವೈದ್ಯ ಶಿಕ್ಷಣ ಸಚಿವ

Comments are closed.