ಕ್ರೀಡೆ

ಧೋನಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ​ ರೋಹಿತ್​

Pinterest LinkedIn Tumblr

ಬರ್ಮಿಂಗ್​ ಹ್ಯಾಮ್​: ತಂಡವು ಗೆಲ್ಲುವ ಹಂತದಲ್ಲಿ ಇದ್ದಾಗ ಬಲವಾದ ಹೊಡೆತದ ಅವಶ್ಯಕತೆ ಇರುತ್ತೇ ಜೊತೆಗೆ ಎಕ್ಸ್ಫ್ಯಾಕ್ಟರ್​​ನಲ್ಲಿ ಆಡಬೇಕಾಗಿತು. ನಮಗೆ ಬೇನ್​ ಸ್ಟ್ರೋಕ್​ ಆಟದ ರೀತಿಯಲ್ಲಿ ಆಡಬೇಕಾದ ಅಗತ್ಯವಿತ್ತು ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್​ ಮನ್​, ಉಪನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

 

ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಂಡದ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ರಿಷಬ್​ ಪಂತ್​, 338ರನ್​ ಬೆನ್ನಟ್ಟುವ ಯೋಜನೆ ಜೊತೆಗೆ ಮಹೇಂದ್ರ ಸಿಂಗ್​ ಧೋನಿ ಅವರ ನಿಧಾನಗತಿ ಬ್ಯಾಟಿಂಗ್​ ಬಗ್ಗೆ ಮಾತನಾಡಿದರು.

 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಸಮರ್ಥನೆ ಮಾಡಿಕೊಂಡಿದರ ಬಗ್ಗೆ ಕೇಳಿದ್ದಕ್ಕೆ ರೋಹಿತ್​ ಶರ್ಮಾ ಮಾತನಾಡದೇ ಮೌನವಹಿಸಿದರು.

 

ತಂಡಕ್ಕೆ ಅಗತ್ಯವಿದ್ದಾಗ ಬೇನ್​ ಸ್ಟ್ರೋಕ್​ ರೀತಿ ಆಟ ಆಡುವುದು ಅವಶ್ಯಕತೆ ಇತ್ತು ಎಂದು ಹೇಳುವ ಮೂಲಕ ಮಹೇಂದ್ರ ಸಿಂಗ್​ ಧೋನಿ ಅವರ ಆಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ಅವರ ಮಾತಿನಲ್ಲಿ ಮೆಲ್ನೋಟಕ್ಕೆ ಹೇಳಬಹುದು.

 

ಅಲ್ಲದೇ ವಿರಾಟ್​ ಕೊಹ್ಲಿ ಸಮರ್ಥನೆ ಬಗ್ಗೆ ಕೂಡ ಅವರು ಬಾಯಿ ತೆರೆಯದೇ ಇರುವುದು ಸಹ ಇದಕ್ಕೆ ಪುಷ್ಠಿಯನ್ನು ನೀಡುತ್ತದೆ.

ಇತ್ತೀಚಿನ ದಿನಗಳಲ್ಲಿ 300ರನ್​ ಹೆಚ್ಚೇನು ಅಲ್ಲ ಒಳ್ಳೆಯ ಮೈದಾನ, ಬೌಂಡರಿಗಳ ಮೂಲಕ ಅದನ್ನು ಸುಲಭವಾಗಿ ಬೆನ್ನಟ್ಟಬಹುದು ಆದರೆ ಉತ್ತಮವಾದ ಆರಂಭ ಕೊಡಬೇಕಷ್ಟೇ ಎಂದು ಅವರು ತಿಳಿಸಿದರು.

 

ನಾವು ಈ ದಿನ ಅದನ್ನ ಮಾಡಿದ್ದೆವು, ಉತ್ತಮ ಜೊತೆಯಾಟ ನೀಡಿದ್ದೆವು ಆದರೆ 330-340ರನ್​ ಬೆನ್ನಟ್ಟುವಾಗ ಎಕ್ಸ್​​ ಪ್ಯಾಕ್ಟರ್ ಇನ್ನಿಂಗ್ಸ್​​ ಆಡುವಾಗ 30-40 ಬಾಲ್​ಗಳಲ್ಲಿ 70ರನ್​ಗಳನ್ನು ಗಳಿಸುವ ಕಡೆ ಗಮನವಹಿಸಬೇಕು. ಇದನ್ನು ಹಾರ್ಧಿಕ್ ಪಾಂಡ್ಯ ಮಾಡಿದರು ಆದರೆ ಅದು ಮುಂದುವರೆಯಲಿಲ್ಲ ಅಷ್ಟೇ ಎಂದು ಅವರು ನುಡಿದರು.

 

ಅಲ್ಲದೆ ಎದುರಾಲಿ ತಂಡದ ಬ್ಯಾಟ್​ಮನ್​ ಆಲ್​ ಲೌಂಡರ್​ ಆಟಗಾರರ ಬೇನ್​ ಸ್ಟ್ರೋಕ್​ ಅವರು ತಂಡದ ಆಟದ ಗತಿಯನ್ನು ಬದಲಾಯಿಸಿತು. ಆಂಗ್ಲರು ಅವರನ್ನು ಬಹುಬೇಗನೇ ಬ್ಯಾಟಿಂಗ್​ಗೆ ಕಳುಹಿಸಿ ಅವರಿಂದ ಭರ್ಜರಿ ಆಟದ ನಿರೀಕ್ಷೆಯನ್ನು ಅವರು ಹೊಂದಿದ್ದರು ಪರಿಣಾಮ ಬೃಹತ್ ಮೊತ್ತ ಸೇರಿತು ಎಂದು ಉಪನಾಯಕ ರೋಹಿತ್​ ಶರ್ಮಾ ಅವರು ತಿಳಿಸಿದರು.

 

ರೋಹಿತ್​ ಶರ್ಮಾ ಈ ಪಂದ್ಯದಲ್ಲಿ 102ರನ್​ ಆಟ ಆಡುವುದರ ಮೂಲಕ ವಿಶ್ವಕಪ್​​ನಲ್ಲಿ ಮೂರನೇ ಭರ್ಜರಿ ಶತಕ ಸಿಡಿಸಿದರು. ಭಾರತ ಆಂಗ್ಲರ ವಿರುದ್ಧ 31ರನ್​ಗಳ ಅಂತರದಿಂದ ಸೋಲು ಕಂಡಿತು.

Comments are closed.