ರಾಷ್ಟ್ರೀಯ

ರಾಮಲಲ್ಲಾ ದೇವಸ್ಥಾನದಲ್ಲಿ ಇನ್ನು ಮೇಲೆ ಗಣ್ಯರೂ ಸರದಿ ಸಾಲಿನಲ್ಲಿ ನಿಲ್ಲಬೇಕು

Pinterest LinkedIn Tumblr


ಅಯೋಧ್ಯ: ಉತ್ತರ ಪ್ರದೇಶದ ಆಯೋಧ್ಯಯಲ್ಲಿರುವ ರಾಮಲಲ್ಲಾ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಲು ಇನ್ನು ಸಚಿವರು, ಗಣ್ಯರೂ ಸರದಿ ಸಾಲಿನಲ್ಲಿ ನಿಲ್ಲಬೇಕು.

ಗಣ್ಯರ ಭೇಟಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ವರೆಗೆ ದೇವಸ್ಥಾನಕ್ಕೆ ಬರುವ ಗಣ್ಯರಿಗೆ ಭದ್ರತಾ ಪಡೆ, ವಿಶೇಷ ದರ್ಶನ ವ್ಯವಸ್ಥೆ ಮಾಡುತ್ತಿತ್ತು. ಅಲ್ಲದೆ ಕೆಲವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಇನ್ನು ಮುಂದೆ ಗಣ್ಯರಿಗೆ ವಿಶೇಷ ದರ್ಶನ ವ್ಯವಸ್ಥೆ ಇರುವುದಿಲ್ಲ. ಅವರೂ ಎಲ್ಲರಂತೆ ಸರದಿಯಲ್ಲೇ ಬರಬೇಕು ಎಂದು ಆದೇಶ ಮಾಡಲಾಗಿದೆ.

ಭದ್ರತಾ ವಿಭಾಗದ ಎಸ್‌ಪಿ ಡಿ ಎನ್‌ ದ್ವಿವೇದಿ ಈ ಸಂಬಂಧ ಸ್ಪಷ್ಟನೆ ನೀಡಿದ್ದು, ಭದ್ರತೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಗಣ್ಯರು, ರಾಜಕಾರಣಿಗಳು, ಉನ್ನತ ಅಧಿಕಾರಿಗಳೆಲ್ಲರೂ, ಸರದಿ ಸಾಲಲ್ಲೇ ದರ್ಶನಕ್ಕೆ ಸಾಗಬೇಕು. ಭದ್ರತಾ ಪಡೆಗಳೊಂದಿಗೆ ತಪಾಸಣೆ ವೇಳೆ ಸಹಕರಿಸಬೇಕು. ಅಂತೆಯೇ ಮಹಿಳೆಯರಿಗೆ ಪ್ರತ್ಯೇಕ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.

2003ರಲ್ಲಿ ಬಿಜೆಪಿ ಮುಖ್ಯಸ್ಥ ಅಶೋಕ್‌ ಸಿಂಘಲ್‌ ಭೇಟಿ ನೀಡುವ ವೇಳೆ ಗೊಂದಲ ಉಂಟಾಗಿದ್ದ ಕಾರಣ ನಿಯಮ ಬದಲಾವಣೆ ಮಾಡಲಾಗಿತ್ತು.

Comments are closed.