ರಾಷ್ಟ್ರೀಯ

ಅಸೂಯೆಯಿಂದ ವೇಶ್ಯೆಯೇ ವೇಶ್ಯೆಯನ್ನು ಇರಿದು ಕೊಲೆ

Pinterest LinkedIn Tumblr


ರಾಜಕೋಟ: ನೋಡಲುತನಗಿಂತ ಸುಂದರವಾಗಿದ್ದು, ಮಾಂಸ ದಂಧೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದ್ದಾಳೆಂಬ ಅಸೂಯೆಯಿಂದ ವೇಶ್ಯೆಯೇ ವೇಶ್ಯೆಯನ್ನು ಇರಿದು ಕೊಲೆ ಮಾಡಿರುವ ಬೆಚ್ಚಿ ಬೀಳಿಸುವ ಘಟನೆ ರಾಜಸ್ಥಾನದ ರಾಜಕೋಟದಲ್ಲಿ ನಡೆದಿದೆ.

ಚಂಪಾ (27) ಮೃತ ದುರ್ದೈವಿ. ಘಟನೆ ಸಂಬಂಧ ರೇಖಾ ಮಂಗೋರಿಯಾ (33) ಎಂಬ ವೇಶ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ರೇಖಾಳನ್ನು ಬಂಧಿಸುವವರೆಗೂ ಮೃತ ಚಂಪಾಳ ದೇಹದ ಗುರುತು ಪತ್ತೆಯಾಗಿರಲಿಲ್ಲ. ತನಿಖೆ ನಡೆಸುತ್ತಿದ್ದ ನಮಗೆ ಕೊಲೆಯಾದ ದಿನದಿಂದ ರೇಖಾ ಕೂಡ ನಾಪತ್ತೆಯಾದ ಬಗ್ಗೆ ಮಾಹಿತಿ ದೊರೆಯಿತು. ಜತೆಗೆ ಕೊಲೆಯಾಗುವ ಮುನ್ನ ಕೊನೆಯದಾಗಿ ಚಂಪಾ-ರೇಖಾ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ನಾವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಗೊಂದಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜೆ ಬಿ ಮಿಥಪರ ತಿಳಿಸಿದ್ದಾರೆ.

ನೋಡಲು ಸುಂದರವಾಗಿದ್ದ ಚಂಪಾ, ದಂಧೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ರೇಖಾ ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾಳೆ.

Comments are closed.