ಕರಾವಳಿ

ಆಡುಸೋಗೆ ಸೋಪ್ಪಿನಲ್ಲಿರುವ ಔಷಧಿಯ ಗುಣ ಬಲ್ಲಿರಾ…?

Pinterest LinkedIn Tumblr

ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಡುಸೋಗೆ ಒಂದು ಪೊದರು ಗಿಡ. ವಾಸಾ, ಸಿಂಹಾಸ್ಯ, ಭೀಷಮ್ಗ್ಮಾತಾ ಮುಂತಾದ ಹೆಸರುಗಳಿರುವ ಆಡುಸೋಗೆಯು ದಮ್ಮು, ಕೆಮ್ಮು, ಗಂಟಲೂರಿ, ಕಜ್ಜಿ, ತೂರಿ, ಇಸಬು ರಕ್ತಸ್ರಾವಗಳಿಗೆ ಸಿದ್ಧಔಷಧ.

ಆಡುಸೋಗೆ ಸೊಪ್ಪಿನ ಲೇಹ್ಯ ಮಾಡುವ ವಿಧಾನ:
ಬೇಕಾಗುವ ಸಾಮಗ್ರಿಗಳು

ಆಡುಸೋಗೆ ಸೊಪ್ಪಿನ ರಸ: 1 ಭಾಗ
ತುಪ್ಪ: ಕಾಲು ಭಾಗ
ಸಕ್ಕರೆ: ಅರ್ಧ ಭಾಗ
ಜೇನುತುಪ್ಪ: ಅರ್ಧ ಭಾಗ
ಹಿಪ್ಪಲಿ ಪುಡಿ: 1 /8 ಭಾಗ

ಮಾಡುವ ವಿಧಾನ:
– ಆಡುಸೋಗೆ ಸೊಪ್ಪಿನ ರಸಕ್ಕೆ ಸಕ್ಕರೆ ಸೇರಿಸಿ ಕರಗಿಸಬೇಕು.
– ಅನಂತರ ಒಲೆಯ ಮೇಲಿಟ್ಟು ನಿಧಾನವಾಗಿ ಕುದಿಸಬೇಕು.
-ನೀರಿನ ಅಂಶ ಕಡಿಮೆಯಾಗಿ ಎಳೆ ಎಳೆಯಾಗಿ ಪಾಕ ಬಂದಾಗ ಹಿಪ್ಪಲಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
– ಅನಂತರ ಒಲೆಯಿಂದ ಕೆಳಗಿಳಿಸಿ ತುಪ್ಪವನ್ನು ಸೇರಿಸಿ ಕಲೆಸಬೇಕು.
-ಪಾಕವು ಆರುತ್ತಾ ಬಂದು ಸ್ವಲ್ಪ ಬಿಸಿಯಿರುವಾಗ, ಜೇನುತುಪ್ಪ ಸೇರಿಸಿ ಮಿಶ್ರ ಮಾಡಿ ಶುದ್ಧವಾದ ಬಾಟಲಿ ಅಥವಾ ಬಾಟಲಿಗೆ ಹಾಕಿ ತುಂಬಿಟ್ಟುಕೊಳ್ಳಬೇಕು.

ಸೇವಿಸುವ ಕ್ರಮ:
ದೊಡ್ಡವರಿಗೆ : ಆಹಾರಕ್ಕೆ ಮೊದಲು ದಿವಸಕ್ಕೆ ಮೂರು ಬಾರಿ ಒಂದರಿಂದ ಮೂರು ಚಮಚ
ಮಕ್ಕಳಿಗೆ: ಆಹಾರಕ್ಕೆ ನಂತರ ದಿವಸಕ್ಕೆ ಮೂರು ಬಾರಿ ಅರ್ಧ ಚಮಚ

ಉಪಯೋಗ: ಕೆಮ್ಮು, ದಮ್ಮು, ಕಫ, ಅಜೀರ್ಣ, ಬಾಯಿರುಚಿ ಇಲ್ಲದಿರುವುದು, ರಕ್ತಸ್ರಾವ ಮುಂತಾದ ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿ.

Comments are closed.