ರಾಷ್ಟ್ರೀಯ

ಆಪ್​ನ 20 ಶಾಸಕರ ಅನರ್ಹತೆ ಶಿಫಾರಸ್ಸಿಗೆ ರಾಷ್ಟ್ರಪತಿ ಅಂಕಿತ

Pinterest LinkedIn Tumblr


ನವದೆಹಲಿ: ಆಮ್ ಆದ್ಮಿ ಪಾರ್ಟಿಯ 20 ಶಾಸಕರನ್ನು ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಅನರ್ಹಗೊಳಿಸಲಾಗಿದೆ.

ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಆಪ್​ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಶುಕ್ರವಾರ ಶಿಫಾರಸು ಮಾಡಿತ್ತು. ಅದರಂತೆ ಭಾನುವಾರ ಆಪ್ ಶಾಸಕರನ್ನು ಅನರ್ಹಗೊಳಿಸಲು ರಾಷ್ಟ್ರಪತಿ ಅಂಕಿತ ನೀಡಿದ್ದಾರೆ.

2015ರಲ್ಲಿ ಆಪ್​ ಕ್ಯಾಬಿನೆಟ್ ಮಂತ್ರಿ ಆಸಿಮ್ ಅಹಮದ್ ಖಾನ್​ರನ್ನು ವಜಾಗೊಳಿಸಿತ್ತು. ಅದೇ ವರ್ಷ ಇನ್ನೊರ್ವ ಸಚಿವ ಸಂದೀಪ್ ಕುಮಾರ್ ಸೆಕ್ಸ್​ ಸ್ಕ್ಯಾಂಡಲ್​ನಲ್ಲಿ ಸಿಲುಕಿಕೊಂಡಿದ್ದರು. ಆಪ್ ಕ್ಯಾಬಿನೆಟ್​ ಪುನರಚನೆ ಸಂದರ್ಭದಲ್ಲಿ ಕಪಿಲ್ ಮಿಶ್ರಾರನ್ನು ವಜಾ ಮಾಡಲಾಗಿದ್ದು ನಂತರ ಅವರು ಪಕ್ಷದ ವಿರುದ್ಧ ಬಂಡಾಯವೆದ್ದರು. ರಜೌರಿ ಗಾರ್ಡನ್​ನ ಆಪ್ ಎಮ್​ಎಲ್​ಎ ಪಂಜಾಬ್ ಅಸೆಂಬ್ಲಿಯನ್ನು ಸ್ಪರ್ಧಿಸಲು ತನ್ನ ಸ್ಥಾನದಿಂದ ಹೊರಬಂದರು. ಹಾಗಾಗಿ 67 ಶಾಸಕರಿಂದ 63ಕ್ಕೆ ಇಳಿಯಿತು. ಇದೀಗ 20 ಶಾಸಕರನ್ನು ಅನರ್ಹ ಗೊಳಿಸಿರುವುದರಿಂದ ಆಪ್​ನ ಶಾಸಕರ ಸಂಖ್ಯೆ 42ಕ್ಕೆ ಇಳಿದಿದೆ.

Comments are closed.