
ಚೆನ್ನೈ: ಪುದುಕೋಟೈ ಜಿಲ್ಲೆಯಲ್ಲಿ ‘ಕಾಣುಂ ಪೊಂಗಲ್’ ಅಂಗವಾಗಿ ಏರ್ಪಡಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ವ್ಯಕ್ತಿ ಇಡ್ಲಿ ತಿಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಂಡಿಕುಡಿ ಗ್ರಾಮದಲ್ಲಿ’ಕಾಣುಂ ಪೊಂಗಲ್’ ಅಂಗವಾಗಿ ಹಲವಾರು ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಿದ್ದರು, ಅದರಲ್ಲೊಂದು ಇಡ್ಲಿ ತಿನ್ನುವ ಸ್ಪರ್ಧೆ.
ಈ ಸ್ಪರ್ಧೆಯಲ್ಲಿ ವೃತ್ತಿಯಲ್ಲಿ ಅಡುಗೆ ಭಟ್ಟನಾಗಿರುವ ಎಸ್ ಚಿನ್ನತಂಬಿ(42) ಉತ್ಸಾಹದಿಂದಲೇ ಭಾಗವಹಿಸಿದ್ದರು. 12 ಇಡ್ಲಿಯನ್ನು ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಮುಂಚಿತವಾಗಿದ್ದ ಇವರಿಗೆ ಇಡ್ಲಿ ಗಂಟಲಿನಲ್ಲಿ ಸಿಕ್ಕಿ ಹಾಕಿ ಕೊಂಡು, ಸ್ಥಳದಲ್ಲಿಯೇ ಕುಸಿದರು. ಕೂಡಲೇ ಸ್ಥಳೀಯರು ಆಂಬ್ಯುಲೆನ್ಸ್ಗೆ ಫೋನ್ ಮಾಡಿದರು, ಆದರೆ ಅಷ್ಟರಲ್ಲಿ ಅವರು ಕೊನೆಯುಸಿರು ಎಳೆದಿದ್ದರು. ಮೃತ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ತಮಾಷೆಯಲ್ಲಿ ಪ್ರಾರಂಭವಾದ ಸ್ಪರ್ಧೆ ದುಃಖದಲ್ಲಿ ಅಂತ್ಯವಾಯಿತು.
Comments are closed.