
ಹೊಸದಿಲ್ಲಿ: ಮಹಾತ್ಮ ಗಾಂಧಿ ಹತ್ಯೆಯ ಹಿಂದೆ ಬೇರೊಬ್ಬ ವ್ಯಕ್ತಿಯ ಕೈವಾಡ ಇಲ್ಲ ಮತ್ತು ಗಾಂಧಿ ಹತ್ಯೆ ಮಾಡಿದ್ದು ಗೋಡ್ಸೆ ಎಂದು ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲ ಅಮರೇಂದ್ರ ಶರನ್ ತಿಳಿಸಿದ್ದಾರೆ. ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಸಂಬಂಧ ಎಲ್ಲ ದಾಖಲೆಗಳನ್ನು ಮರು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಅಮರೇಂದ್ರ ಶರನ್ ಅವರಿಗೆ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಗಾಂಧಿ ಹತ್ಯೆ ಹಿಂದೆ ವಿದೇಶಿ ಗುಪ್ತಚರ ಸಂಘಟನೆಯ ಕೈವಾಡ ಇದೆ ಎಂಬುದಕ್ಕೆ ಆಧಾರವಿಲ್ಲ. ನಾಥೂರಮ್ ಗೋಡ್ಸೆಯನ್ನು ಹೊರತು ಪಡಿಸಿದ ವ್ಯಕ್ತಿ ಗಾಂಧಿ ಹತ್ಯೆ ನಡೆಸಿದ್ದು ಎಂಬುದಕ್ಕೆ ಯಾವುದೇ ಪೂರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲ ಅಮರೇಂದ್ರ ಶರನ್ ತಿಳಿಸಿದ್ದಾರೆ.
ನಾಲ್ಕು ಬುಲೆಟ್ಗಳ ಥಿಯರಿಗೆ ಆಧಾರವಿಲ್ಲ. ವೀರ ಸಾವರ್ಕರ್ ಅವರ ಭಕ್ತ ಮತ್ತು ‘ಅಭಿನವ ಭಾರತ್’ ಸಂಸ್ಥಾಪಕ ಪಂಕಜ್ ಫಡ್ನಿಸ್ ಅವರು ಮಹಾತ್ಮ ಗಾಂಧಿ ಅವರ ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಲಾಯಿತು. ಅನಾಮಿಕ ವ್ಯಕ್ತಿಯೊಬ್ಬ ಹಾರಿಸಿದ 4ನೇ ಗುಂಡು ಗಾಂಧಿ ಅವರ ಪ್ರಾಣವನ್ನು ತೆಗೆಯಿತು ಎಂದು ವಾದ ಮಾಡಿದ್ದರು. ಈ ವಾದಕ್ಕೆ ಅಗತ್ಯ ಪುರಾವೆಗಳಿಲ್ಲ ಎಂದು ಶರನ್ ತಿಳಿಸಿದ್ದಾರೆ.
Comments are closed.