
ಹೊಸದಿಲ್ಲಿ: ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ದಾಖಲೆಯ ಮೂರನೇ ದ್ವಿಶತಕ ಸಾಧನೆ ಬರೆದಿದ್ದರು.
ಈ ಮೂಲಕ ದ್ವಿತೀಯ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿತ್ತು. ಇದೀಗ ಭಾನುವಾರ ನಡೆಯಲಿರುವ ಕೊನೆಯ ಪಂದ್ಯವು ಇತ್ತಂಡಗಳ ಪಾಲಿಗೆ ನಿರ್ಣಾಯಕವೆನಿಸಿದೆ.
ಈ ಹಿಂದೆ ಶ್ರೀಲಂಕಾ ವಿರುದ್ಧವೇ ಜೀವನಶ್ರೇಷ್ಠ 264 ರನ್ ಮತ್ತು ಆಸ್ಟ್ರೇಲಿಯಾ ವಿರುದ್ಧ 209 ರನ್ಗಳ ಸಾಧನೆ ಮಾಡಿದ್ದರು. ಈ ಮೂರು ದ್ವಿಶತಕಗಳ ಪೈಕಿ ಯಾವುದು ಶ್ರೇಷ್ಠ ಎಂಬುದನ್ನು ಹಿಟ್ಮ್ಯಾನ್ ಅವರನ್ನು ಪ್ರಶ್ನಿಸಲಾಗಿತ್ತು.
ಕೋಚ್ ರವಿಶಾಸ್ತ್ರಿ ನಡೆಸಿದ ಸಂದರ್ಶನದಲ್ಲಿ ಮೂರು ದ್ವಿಶತಕಗಳು ನಿರ್ಣಾಯಕ ಘಟ್ಟದಲ್ಲಿ ದಾಖಲಾಗಿರುವುದರಿಂದ ಬೇರ್ಪಡಿಸುವುದು ಕಷ್ಟಕರ. ಹಾಗಿದ್ದರೂ 264 ಶ್ರೇಷ್ಠವಾದುದು ಎಂದಿದ್ದಾರೆ.
ತಮ್ಮ ಇನ್ನಿಂಗ್ಸ್ ಬಗ್ಗೆ ವಿವರಿಸಿದಾಗ ರೋಹಿತ್, ‘ನಾನು ತಪ್ಪು ಮಾಡುವ ವರೆಗೂ ಔಟಾಗಲಾರೆ ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತಿದೆ. ಸಾಧ್ಯವಾದಷ್ಟು ಬ್ಯಾಟಿಂಗ್ ಮಾಡುವುದು ನನ್ನ ಇರಾದೆಯಾಗಿತ್ತು’ ಎಂದಿದ್ದಾರೆ.
ನಾವೊಂದು ಬ್ಯಾಟಿಂಗ್ ವಿಭಾಗವಾಗಿ ಸಾಂಘಿಕವಾಗಿ ಆಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದೆವು. ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡೆವು. ಸ್ಟ್ರೈಕ್ ರೊಟೆಟ್ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆವು. ಅಲ್ಲದೆ ಶಾಟ್ ಆಯ್ಕೆಯೂ ಮೇಲೆಯೂ ಗಮನ ಹರಿಸಿದ್ದೆವು ಎಂದರು.
ಅದೇ ಹೊತ್ತಿಗೆ ಅನಾಯಾಸವಾಗಿ ಸಿಕ್ಸ್ ಹೊಡೆಯುವ ತಾಕಿತ್ತಿನ ಬಗ್ಗೆ ಕೇಳಿದಾಗ, ನನಗೆ ಎಂಎಸ್ ಧೋನಿ ಅಥವಾ ಕ್ರಿಸ್ ಗೇಲ್ ತರಹನೇ ತಮ್ಮ ಬಲದಿಂದಲೇ ಸಿಕ್ಸ್ ಹೊಡೆಯಲು ಸಾಧ್ಯವಿಲ್ಲ ಎಂಬುದು ಸರಿಯಾಗಿ ತಿಳಿದಿದೆ. ಹಾಗಾಗಿ ಟೈಮಿಂಗ್ ಮಾಡುವುದರತ್ತ ಹೆಚ್ಚು ಗಮನ ವಹಿಸಿದ್ದೆ ಎಂದರು.
153 ಎಸೆತಗಳನ್ನು ಎದುರಿಸಿದ ರೋಹಿತ್ 13 ಬೌಂಡರಿ ಹಾಗೂ 12 ಸಿಕ್ಸರ್ಗಳ ನೆರವಿನಿಂದ 208 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಪೈಕಿ ಕೊನೆಯ ಶತಕ ಕೇವಲ 35 ಎಸೆತಗಳಲ್ಲಿ ದಾಖಲಾಗಿದ್ದವು.
Comments are closed.