ದೆಹಲಿ: ಮತ್ತೊಂದು ಅವಧಿಗೆ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯನ್ನು ಅಲಂಕರಿಸಲು ಇಚ್ಚೆಯಿಲ್ಲ ಎಂದು ರಘುರಾಮ್ ರಾಜನ್ ಸಿಬ್ಬಂದಿಯ ಜೊತೆ ತಮ್ಮ ನಿಲುವನ್ನು ವ್ಯಕ್ತ ಪಡಿಸಿರುವುದಾಗಿ ಮೂಲಗಳು ತಿಳಿಸಿವೆ
ಸಾಕಷ್ಟ ಗೊಂದಲಕ್ಕೆ ಕಾರಣವಾಗಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯನ್ನು ಎರಡನೇ ಬಾರಿ ಮುಂದುವರಿಸಲು ರಘುರಾಮ್ ರಾಜನ್ ಹಿಂದೇಟು ಹಾಕಿದ್ದು, ಅವಧಿಯ ಬಳಿಕ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
‘ಈ ವರ್ಷದ ಸೆಪ್ಟೆಂಬರ್ 4ಕ್ಕೆ ನನ್ನ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಬಳಿಕ ನಾನು ಶೈಕ್ಷಣಿಕ ಕ್ಷೇತ್ರಕ್ಕೆ ಮರಳಬೇಕೆಂದಿದ್ದೇನೆ. ಈ ಕುರಿತು ಸರ್ಕಾರದೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದು, ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ರಾಜನ್ ಅವರು ಆರ್ಬಿಐ ಸಿಬ್ಬಂದಿಗೆ ಕಳಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
ನಾನು ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಪ್ರಗತಿಪರ ಕೆಲದಲ್ಲಿ ತೊಡಗಿದ್ದೇನೆ, ನಾನು ಈ ಹುದ್ದೆಯನ್ನು ಅಲಂಕರಿಸಿದ ಸಮಯದಲ್ಲಿ ಹಣದುಬ್ಬರ ಹೆಚ್ಚಾಗಿತ್ತು, ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಆದರೆ ಈಗ ಹಣದುಬ್ಬರ ನಿಯಂತ್ರಿಸುವಲ್ಲಿ ನಾವು ಸಾಕಷ್ಟು ಸಫಲತೆಯನ್ನು ಕಂಡಿದ್ದೇವೆ. ಈ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಸಂದೇಶದಲ್ಲಿ ರಾಜನ್ ಹೇಳಿದ್ದಾರೆ. 2013ರ ಸೆಪ್ಟೆಂಬರ್ 23ರಂದು ರಾಜನ್ ಆರ್ಬಿಐನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
Comments are closed.