Uncategorized

ಇಂದು ಕಾಂಗ್ರೆಸ್​ನ ಮತ್ತೈದು ವಿಕೆಟ್​ ಪತನ! ರಾಜೀನಾಮೆ ಕೊಡುವವರ ಹೆಸರು ಕೇಳಿದರೆ ಬೆಚ್ಚಿಬೀಳ್ತಿರಿ!!

Pinterest LinkedIn Tumblr


ಸರ್ಕಾರವನ್ನು ಉಳಿಸಿಕೊಳ್ಳಲು ಸಚಿವರ ತಲೆದಂಡ ಪಡೆದು ರಣತಂತ್ರ ರೂಪಿಸಿರುವ ಮೈತ್ರಿ ಸರ್ಕಾರಕ್ಕೆ ಇಂದು ಮತ್ತಷ್ಟು ಶಾಕ್​ ಕಾದಿದೆ. ಹೌದು ಇಂದು ಮತ್ತೈದು ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಲಿದ್ದು, ಸ್ಪೀಕರ್​ ಸಮಯಾವಕಾಶ ಕೋರಿದ್ದಾರೆ ಎಂಬ ಶಾಕಿಂಗ್ ನ್ಯೂಸ್​ ಲಭ್ಯವಾಗಿದೆ.

ಹೌದು ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಿ ಅವರಿಗೆ ಸಚಿವ ಸ್ಥಾನ ನೀಡುವುದಕ್ಕಾಗಿ ಮೈತ್ರಿ ನಾಯಕರು ಪ್ಲ್ಯಾನ್​ ರೂಪಿಸಿದ್ದು, ಇದಕ್ಕಾಗಿ 21 ಕಾಂಗ್ರೆಸ್ ಹಾಗೂ 9 ಜೆಡಿಎಸ್ ಸಚಿವರ ರಾಜೀನಾಮೆ ಪಡೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ಇಂದು ಅತೃಪ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಬೆಂಗಳೂರು ಶಾಸಕಿ ಸೌಮ್ಯ, ರೆಡ್ಡಿ, ರೋಷನ್ ಬೇಗ್​, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಬೆಳಗಾವಿ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಎಂಟಿಬಿ ನಾಗರಾಜ್ ಸೇರಿ ಒಟ್ಟು 5 ಜನರು ರಾಜೀನಾಮೆ ನೀಡಲಿದ್ದಾರೆ.

ಈಗಾಗಲೇ ಈ ಶಾಸಕರು ರಾಜೀನಾಮೆಗಾಗಿ ಸ್ಪೀಕರ್ ಕಚೇರಿಯಲ್ಲಿ ಸಮಯಾವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸಧ್ಯ 11 ಕ್ಕೂ ಹೆಚ್ಚು ಶಾಸಕರ ರಾಜೀನಾಮೆಯಿಂದ ಸರ್ಕಾರ ಸಂಕಷ್ಟದಲ್ಲಿದ್ದು, ಒಂದೊಮ್ಮೆ ಇಂದು ಮತ್ತೆ 5 ಶಾಸಕರು ರಾಜೀನಾಮೆ ನೀಡಿದಲ್ಲಿ ಸರ್ಕಾರ ಮತ್ತಷ್ಟು ಅತಂತ್ರವಾಗೋದು ಗ್ಯಾರಂಟಿ ಎನ್ನಲಾಗ್ತಿದೆ.

Comments are closed.