ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭ ಮೇಳಕ್ಕೆ ಇಂದು ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗಂಗಾರತಿ ವಿಶೇಷ ಪೂಜೆ ಸಲ್ಲಿಸಿದರು.ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ, ಭಾವಭಕ್ತಿಯೊಂದಿಗೆ ಗಂಗಾರತಿ ಪೂಜೆ ಮಾಡಿದರು.
Had the good fortune of taking a holy dip at the #Kumbh. Prayed for the well being of 130 Crore Indians. pic.twitter.com/jTI2QbmWxb
— Narendra Modi (@narendramodi) February 24, 2019
ನಂತರ, ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಸಚಿವಾಲಯ ಆಯೋಜಿಸಿದ್ದ ಸ್ವಚ್ಛ ಕುಂಭ ಸ್ವಚ್ಛ ಅಭಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, ಸಪಾಯಿ ಕರ್ಮಾಚಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ನಾವಿಕರಿಗೆ ಸ್ವಚ್ಛ ಕುಂಭ ಸ್ವಚ್ಛ ಅಭಾರ್ ಪ್ರಶಸ್ತಿ ಪ್ರಧಾನ ಮಾಡಿದರು.
ಗಂಗಾ, ಯುಮುನಾ ಹಾಗೂ ಸರಸತ್ವಿ ನದಿಗಳ ಸಂಗಮದ ಪವಿತ್ರ ಕ್ಷೇತ್ರದಲ್ಲಿ ಸುಮಾರು 48 ದಿನಗಳ ಕಾಲ ನಡೆಯುತ್ತಿರುವ ಕುಂಭಮೇಳ ಕೋಟ್ಯಾಂತರ ಜನರನ್ನು ಆಕರ್ಷಿಸುತ್ತಿದ್ದು, ಈಗಾಗಲೇ ಸಹಸ್ರಾರು ಮಂದಿ ಕುಂಭಮೇಳದಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ.
Comments are closed.