ಕರಾವಳಿ

15ಕ್ಕೂ ಅಧಿಕ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಕುಂದಾಪುರದಿಂದ ಗಡಿಪಾರು!

Pinterest LinkedIn Tumblr

ಕುಂದಾಪುರ: 15ಕ್ಕೂ ಅಧಿಕ ಕಳವು ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಇಬ್ಬರನ್ನು ಗಡಿಪಾರು ಮಾಡಿ ಕುಂದಾಪುರ ಉಪವಿಭಾಗದ ದಂಡಾಧಿಕಾರಿ ಆದೇಶ ಮಾಡಿದ್ದಾರೆ. ಕುಂದಾಪುರದ ಕೋಡಿ ನಿವಾಸಿ ಮಹಮ್ಮದ್ ರಫೀಕ್ ಹಾಗೂ ಕುಂದಾಪುರದ ಗುಲ್ವಾಡಿ ನಿವಾಸಿ ಮೊಹಿದ್ದೀನ್ ಬ್ಯಾರಿಯನ್ನು ಗಡಿಪಾರು ಮಾಡಲಾಗಿದೆ.

ಇಬ್ಬರ ಮೇಲೂ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಇಬ್ಬರನ್ನು ಸೋಮವಾರ ಸಂಜೆ ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಮತ್ತು ತಂಡ ಬಂಧಿಸಿದ್ದು ಕುಂದಾಪುರ ಉಪವಿಭಾಗದ ದಂಡಾಧಿಕಾರಿಯವರ ಮುಂದೆ ಹಾಜರು ಪಡಿಸಲಾಯಿತು. ಅವರು ಭಟ್ಕಳ ಉಪ ವಿಭಾಗಕ್ಕೆ ಗಡಿಪಾರುಮಾಡಿ ಆದೇಶಿಸಿದ್ದರು. ಅದರಂತೆಯೇ ಇಬ್ಬರನ್ನು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮುಂದೆ ಹಾಜರುಪಡಿಸಲು ಕರೆದೊಯ್ಯಲಾಗಿದೆ.

Comments are closed.