ಕರಾವಳಿ

ದೇಶದ ಭದ್ರತೆಗಾಗಿ ಪ್ರಾಣ ಕಳೆದುಕೊಂಡ ಪೊಲೀಸರ ಸಂಸ್ಮರಣೆ ನಮ್ಮ ಕರ್ತವ್ಯ: ಅಶುತೋಷ್ ಗೌರ್

Pinterest LinkedIn Tumblr

ಮಂಗಳೂರು : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಎನ್.ಎಂ.ಪಿ.ಟಿ. ಘಟಕದ ವತಿಯಿಂದ ಪೊಲೀಸ್ ಸಂಸ್ಮರಣಾ ದಿನಾಚರಣೆ ಸೋಮವಾರ ಸಿಐಎಸ್‍ಎಫ್ ಘಟಕದಲ್ಲಿ ನಡೆಯಿತು.

ಸಿಐಎಸ್‍ಎಫ್ ಡೆಪ್ಯುಟಿ ಕಮಾಂಡೆಂಟ್ ಅಶುತೋಷ್ ಗೌರ್ ಅವರು ಮುಖ್ಯ ಅತಿಥಿಯಾಗಿ, ಹುತಾತ್ಮರಿಗೆ ಗೌರವ ಸಲ್ಲಿಸಿದರು.

ರಾಷ್ಟ್ರೀಯ ಪೊಲೀಸ್ ಸಂಸ್ಮರಣೆ ದಿನವನ್ನು ಕರ್ತವ್ಯದಲ್ಲಿ ಶೌರ್ಯ ಪ್ರದರ್ಶಿಸಿ ಪ್ರಾಣ ತ್ಯಾಗ ಮಾಡಿದ ಪೊಲೀಸರ ಸ್ಮರಣಾರ್ಥ ಆಚರಿಸಲಾಗುತ್ತಿದೆ. ದೇಶದ ಭದ್ರತೆಗಾಗಿ ಪ್ರಾಣ ಕಳೆದುಕೊಂಡ ಪೊಲೀಸರ ಸಂಸ್ಮರಣೆ ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಸಹಾಯಕ ಕಮಾಂಡೆಂಟ್ ಎಸ್.ಎನ್. ಚೌಧರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.