ಕರಾವಳಿ

ಬಜ್ಪೆ ವೇಶ್ಯಾವಟಿಕೆ ಅಡ್ಡೆಗೆ ದಾಳಿ – ನಾಲ್ವರು ಆರೋಪಿಗಳ ಸೆರೆ – ನಾಲ್ವರು ಮಹಿಳೆಯರ ರಕ್ಷಣೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.07: ಮನೆಯೊಂದರಲ್ಲಿ ವೇಶ್ಯಾವಟಿಕೆ ನಡೆಯುತ್ತಿದ್ದ ಜಾಲವನ್ನು ಬಜ್ಪೆ ಪೊಲೀಸರು ಮಂಗಳವಾರ ಪತ್ತೆ ಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಉಡುಪಿಯ ಕುತ್ಯಾರು ಗ್ರಾಮದ ಶಿವಾನಂದ (45), ಪಂಜಿಮೊಗರು ಗ್ರಾಮದ ನಿರಂಜನ್ ಆರ್. ಕೋಟ್ಯಾನ್ (42), ಮುನ್ನೂರು ಗ್ರಾಮದ ಕುತ್ತಾರ್ ಪದವು ನಿವಾಸಿ ಎಂ.ಬಿ. ಇಸ್ಮಾಯೀಲ್ (35), ಮಂಜೇಶ್ವರ ಸಮೀಪದ ಮೀಂಜ ನಿವಾಸಿ ಕಡವಲಪ್ಪು ಮುಹಮ್ಮದ್ ಅಬ್ಬುಸಲೀಂ (42) ಬಂಧಿತ ಆರೋಪಿಗಳು

ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಠಾಣೆಯ ಪೊಲೀಸ್ ಅಧಿಕಾರಿಗಳು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಡೈಮಂಡ್ ಹೋಮ್ ಬಳಿ ವೇಶ್ಯಾವಟಿಕೆ ನಡೆಯುತ್ತಿದ್ದ ಮನೆಗೆ ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಮುನ್ನ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಚಾರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈ ಹರೀಶ್, ಸುಬ್ರಹ್ಮಣ್ಯ ಮತ್ತು ಬಜ್ಪೆ ಇನ್‌ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಎಸ್ಸೈ ಶಂಕರ ನಾಯರಿ ಹಾಗೂ ಬಜ್ಪೆ ಠಾಣೆಯ ಸಿಬ್ಬಂದಿಗಳಾದ ಲಾವಣಿ, ರಕ್ಷಿತಾ, ರಾಜೇಶ್ ಮತ್ತು ಲಕ್ಷ್ಮಣ ಕಾಂಬ್ಳೆ, ಕಿಷ್ಟಪ್ಪರಾಥೋಡ್ ಪಾಲ್ಗೊಂಡಿದ್ದರು.

Comments are closed.