ಕರಾವಳಿ

ತೋಟದಲ್ಲಿ ಕಟ್ಟಿದ್ದ ಜಾನುವಾರು ಕಳವು: ಕಾರು ಸಮೇತ ನಾಲ್ವರು ವಶಕ್ಕೆ

Pinterest LinkedIn Tumblr

ಕುಂದಾಪುರ: ಅಡಿಕೆ ತೋಟದಲ್ಲಿ ಕಟ್ಟಲಾಗಿದ್ದ 2 ½ ವರ್ಷ ಪ್ರಾಯದ 8 ಸಾವಿರ ಮೌಲ್ಯದ ಗಂಡು ಕರುವಿನ (ಗುಡ್ಡ) ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು ಕ್ರತ್ಯಕ್ಕೆ ಬಳಸಿದ ಕಾರು ಸಹ ಪೊಲೀಸರು ವಶಪಡ್ಸಿಕೊಂದ ಘಟನೆ ನಡೆದಿದೆ.

ಗಂಗೊಳ್ಳಿ ಮೂಲದ ಉಸಾಮ (21) ಹಾಗೂ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಫೆ.2 ರಂದು ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಎಮ್. ಚೆರಿಯಬ್ಬ ಎನ್ನುವರ ಅಡಿಕೆ ತೋಟದಲ್ಲಿ ಕೆಲಸಗಾರರು ಕಟ್ಟಿದ್ದ 2 ½ ವರ್ಷ ಪ್ರಾಯದ 8000 ರೂಪಾಯಿ ಮೌಲ್ಯದ ಗಂಡು ಕರು ಹಗ್ಗ ಸಮೇತ ಕಾಣೆಯಾಗಿದ್ದು ಕರು ಕಳವಾದ ಬಗ್ಗೆ ಅವರು ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನಂತೆ ಕಾರ್ಯಾಚರಣೆಗಿಳಿದ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ಹಾಗೂ ತಂಡ ತೋಟದ ಕೆಲಸಗಾರರು ನೀಡಿದ ಮಾಹಿತಿ ಜಾಡು ಹಿಡಿದು ತನಿಖೆ ಕೈಗೊಂಡಿದ್ದು ಕೆಲವು ಖಚಿತ ವರ್ತಮಾನದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಉಸಾಮನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇತರೆ ಮೂವರನ್ನು ಬಾಲನ್ಯಾಯಮಂಡಳಿ ಎದುರು ಹಾಜರುಪಡಿಸಲಾಗಿದೆ.

Comments are closed.