ಕರಾವಳಿ

ಹಿಂಬಾಗಿಲು ಎಮ್‌ಎಲ್‌ಸಿ ಐವನ್ ಡಿಸೋಜಾರಿಂದ ದಾಖಲೆ ಮತದಿಂದ ಗೆದ್ದಿರುವ ಸಂಸದರಿಗೆ ಟೀಕೆ : ಕ್ಷಮೆಯಾಚಿಸಲು ಶಾಸಕ ಕಾಮಾತ್ ಆಗ್ರಹ

Pinterest LinkedIn Tumblr

ಮಂಗಳೂರು : ಜನರಿಂದ ಎರಡು ಬಾರಿ ದಾಖಲೆಯ ಮತಗಳ ಅಂತರದಿಂದ ಗೆದ್ದಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಹಿಂಬಾಗಿಲಿನಿಂದ ವಿಧಾನಪರಿಷತ್ ಗೆ ಆಯ್ಕೆಯಾಗಿರುವ ಐವನ್ ಡಿಸೋಜಾ ಅವರು ವೈಯಕ್ತಿಕವಾಗಿ ಟೀಕೆ ಮಾಡಿರುವುದು ಸರಿಯಲ್ಲ. ವಿಧಾನಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜಾ ಅವರು ಸಂಸದ ನಳಿನ್ ಕುಮಾರ್ ಕಟೀಲು ಅವರ ಬಟ್ಟೆ ಹರಿಯುತ್ತೇನೆ, ಅಂಗಿ ಬಿಚ್ಚುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಸಂಸ್ಕೃತಿಯನ್ನು ತೋರಿಸಿದ್ದಾರೆ.

ಆಚಾರವಿಲ್ಲದ ನಾಲಿಗೆಯಿಂದ ಏನೇನೋ ಹೇಳಿದರೆ ಕರಾವಳಿಯ ಸಭ್ಯ ನಾಗರಿಕರಿಗೆ ಇವರ ರಾಜಕೀಯ ಗೊತ್ತಾಗುತ್ತದೆ. ಐವನ್ ಡಿಸೋಜಾ ಅವರ ಕೀಳುಮಟ್ಟದ ಹೇಳಿಕೆಯನ್ನು ಅವರ ಪಕ್ಷದವರೇ ಆಂತರಿಕವಾಗಿ ವಿರೋಧಿಸಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಜನರಿಂದ ನೇರವಾಗಿ ಎರಡೆರಡು ಬಾರಿ ಆಯ್ಕೆಯಾದ ಸಂಸದರ ಬಗ್ಗೆ ಕೀಳುಮಟ್ಟದ ಹೇಳಿಕೆ ಕರಾವಳಿಯ ಜನರಿಗೆ ಆದ ಅವಮಾನ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಯಾವುದೇ ವ್ಯಕ್ತಿಗೂ ಅಗೌರವ ತೋರುವುದು, ಯಾವುದೇ ವ್ಯಕ್ತಿಗೆ ಹಗುರವಾಗಿ ಮಾತನಾಡುವುದು ಕರಾವಳಿಯ ಸಂಸ್ಕೃತಿಯಲ್ಲ ಮತ್ತು ಅದು ಶೋಭೆ ತರುವಂತದ್ದಲ್ಲ. ಐವನ್ ಡಿಸೋಜಾ ಒಬ್ಬರು ಜವಾಬ್ದಾರಿಯುತ ನಾಗರಿಕ ಮತ್ತು ಶಾಸಕ ಹೌದು ಎಂದಾದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಕ್ಷಮೆ ಕೋರಲಿ ಎಂದು ಶಾಸಕ ಕಾಮತ್ ಗುಡುಗಿದ್ದಾರೆ.

Comments are closed.