ಕರಾವಳಿ

ಕಾಣೆಯಾದ ಮೀನುಗಾರರು ಜೀವಂತವಾಗಿ, ಬಂಧನದಲ್ಲಿದ್ದಾರೆ: ನುಡಿ ಕೊಟ್ಟ ಬೊಬ್ಬರ್ಯ ದೈವ

Pinterest LinkedIn Tumblr

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಿಗೂಢವಾಗಿ ನಾಪತ್ತೆಯಾದ ಉಡುಪಿ ಮೂಲದ ಏಳು ಮೀನುಗಾರರು ಈವರೆಗೂ ಪತ್ತೆಯಾಗಿಲ್ಲ. ಮೀನುಗಾರರನ್ನು ಹುಡುಕುವ ಸಾಕಷ್ಟು ಪ್ರಯ್ತ್ನಗಳು ವಿವಿಧ ಆಯಾಮಗಳಲ್ಲಿ ನಡೆಯುತ್ತಿದ್ದರೂ ಕೂಡ ನಿರೀಕ್ಷಿತ ಫಲಕಾಣದೇ ಇರುವುದರಿಂದ ಊರವರು ಬುಧವಾರ ಮಧ್ಯಾಹ್ನ ಗ್ರಾಮದ ಬೊಬ್ಬರ್ಯ ದೈವಕ್ಕೆ ಮೊರೆ ಹೋಗಿದ್ದಾರೆ.

ದೈವ ಹೇಳಿದ್ದೇನು?
ಎಲ್ಲರು ಜೀವಂತವಾಗಿ ಬೇರೆ ರಾಜ್ಯದಲ್ಲಿದ್ದಾರೆ. ಉತ್ತರ ಭಾಗದಲ್ಲಿ ದಟ್ಟ ಪೊದೆಗಳ ಮಧ್ಯೆ ದುಷ್ಟರು ಬಂಧನದಲ್ಲಿರಿಸಿದ್ದಾರೆ. ಅಲ್ಲಿಗೆ ಮನುಷ್ಯ ಹೋಗುವ ಹಾಗಿಲ್ಲ. ರಾತ್ರಿ ಬಿಟ್ಟು ಹಗಲೂ ಅಲ್ಲಿಗೆ ಹೋಗುವುದು ಅಪಾಯಕಾರಿ. ಹುಡುಕಾಟಕ್ಕೆ ಸರಕಾರದ ಪ್ರಯತ್ನ ಸಾಕಾಗುತ್ತಿಲ್ಲ. ಉನ್ನತ ಮಟ್ಟದಲ್ಲಿ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಲಿ, ಅದರ ಹಿಂದೆ ನಾನಿದ್ದು ಅವರೆಲ್ಲರನ್ನೂ ಬರಮಾಡಿ ಕೊಳ್ಳುತ್ತೇನೆ ಎಂದು ಬೊಬ್ಬರ್ಯ ದೈವ ನುಡಿದಿದೆ ಎನ್ನಲಾಗಿದೆ.

Comments are closed.