ಕರಾವಳಿ

ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಕಾಯ್ದೆಯಡಿ ಪತ್ರಕರ್ತ ಅಂದರ್!

Pinterest LinkedIn Tumblr

ಉಡುಪಿ : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ದೌರ್ಜನ್ಯ ನಡೆಸಿದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ತಾಲೂಕು ಹಿರಿಯ ಪ್ರಾಥಮಿಕ ಶಾಲೆಯೊಂದರ ಅಪ್ರಾಪ್ತ ಬಾಲಕ ಸೇರಿ ಮತ್ತೆ ಆರುಜನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ (40) ಬಂಧಿತನಾಗಿದ್ದಾನೆ.

ದಿನಪತ್ರಿಕೆಯೊಂದರಲ್ಲಿ ಹೆಮ್ಮಾಡಿ ಭಾಗದ ಬಿಡಿ ಸುದ್ದಿ ವರದಿಗಾರನಾಗಿದ್ದ ಚಂದ್ರ ಕೆ.ಹೆಮ್ಮಾಡಿ ನ.10ರಂದು ಸಂಜೆ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿ ಮನೆಗೆ ತರಳಿ ಪಕ್ಷಿ ಹಾಗೂ ರಸ್ತೆ ಪೋಟೊ ತೆಗೆಯಲು ಹೋಗಬೇಕಿದ್ದು, ಕಾಡಿನಲ್ಲಿ ಒಬ್ಬನೇ ಹೋಗಲು ಭಯವಾಗುತ್ತಿದೆ. ಹಾಗಾಗಿ ತಮ್ಮ ಮಗನ ತನ್ನ ಜತೆ ಕಳುಹಿಸಿಕೊಡುವಂತೆ ಸಂತ್ರಸ್ತ ಬಾಲಕನ ತಂದೆ ಬಳಿ ಕೇಳಿಕೊಂಡಿದ್ದು, ಮಗನನ್ನು ತಂದೆ ಕಳುಹಿಸಿ ಕೊಟ್ಟಿದ್ದಾರೆ.

ಕಾಡಿನಿಂದ ಬಂದ ಮಗ ಭಯವಾಗುತ್ತದೆ, ನಡೆದಾಡ‌ಲಾಗುತ್ತಿಲ್ಲ, ಎಂದು ಮನೆಯಲ್ಲಿ ಹೇಳಿಕೊಂಡಿದ್ದ. ಈ ಘಟನೆ ತರುವಾಯ ಅತೀವ ಮಾನಸಿಕ ಖಿನ್ನತೆ ಒಳಗಾಗಿದ್ದ ಬಾಲಕನನ್ನು ಮಣಿಪಾಲ ಖಾಸಗಿ ಆಸ್ಪತ್ರೆ ಮಾನಸಿಕ ವೈದ್ಯರಬಳಿ ಪರೀಕ್ಷೆ ನಡೆಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕನ ಪೋಷಕರು ಉಡುಪಿ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದು, ಎಸ್ಪಿ ಮಾರ್ಗದರ್ಶನದಲ್ಲಿ ಆಪಾದಿತನ ಬಂದಿಸಿದ್ದು, ಆರೋಪಿ ಚಂದ್ರನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನು ಹತ್ತು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಪೊಲೀಸರ ಕಾರ್ಯಾಚರಣೆ..
ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಹಾಗೂ ಸಿಬ್ಬಂದಿಗಳ ತಂಡ ತಡರಾತ್ರಿ ಆರೋಪಿ ಮನೆಗೆ ತೆರಳಿ ಬಂಧಿಸಿದ್ದು ಬಳಿಕ ಬೈಂದೂರು ಠಾಣೆಗೆ ಆರೋಪಿಯನ್ನು ಹಸ್ತಾಂತರಿಸಲಾಗಿದೆ.

ಬೈಂದೂರು ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ.

Comments are closed.