ಕರ್ನಾಟಕ

ಸ್ಯಾಂಡಲ್ ವುಡ್‌ನ ಹಿರಿಯ ನಟ ಜೈ ಜಗದೀಶ್‌ ಅವರ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು

Pinterest LinkedIn Tumblr

ಬೆಂಗಳೂರು : ಸ್ಯಾಂಡಲ್ ವುಡ್‌ನ ಹಿರಿಯ ನಟ ಜೈ ಜಗದೀಶ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅವಘಡಕ್ಕೀಡಾದ ಘಟನೆ ಶುಕ್ರವಾರ ನಡೆದಿದ್ದು,ಅದೃಷ್ಟವಷಾತ್‌ ಜೈಜಗದೀಶ್‌‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೈ ಜಗದೀಶ್‌ ಅವರು ಬೆಂಗಳೂರಿನಿಂದ ಚನ್ನರಾಯಪಟ್ಟಣದ ಮೂಲಕ ಮಡಿಕೇರಿಯ ಸಂಬಂಧಿಕರ ಮನೆಗೆಂದು ತೆರಳುತ್ತಿದ್ದ ವೇಳೆ ಬೈಕ್‌ ಸವಾರ ಅಡ್ಡ ಬಂದಿದ್ದು, ಕಾರು ಜಮೀನಿಗೆ ಇಳಿದು ಜಖಂಗೊಂಡಿದೆ.

ಜೈ ಜಗದೀಶ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.