ಕರಾವಳಿ

ಶೀರೂರು ಶ್ರೀ ಸಾವು ಪ್ರಕರಣ: ದಿನಕ್ಕೊಂದು ಟ್ವಿಸ್ಟ್, ದಿನಕ್ಕೊಂದು ಆಡಿಯೋ!

Pinterest LinkedIn Tumblr

ಉಡುಪಿ: ಶಿರೂರು ಶ್ರೀಗಳ ನಿಗೂಡ ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಾ ಇದೆ. ಶ್ರೀಗಳ ಸಹಜ ಸಾವೋ ಅಥಾವ ಕೊಲೆಯೋ ಎಂಬ ನಿಗೂಡ ರಹಸ್ಯದ ಬಹಿರಂಗಕ್ಕೆ ಜನ ಕಾದು ಕುಳಿತಿದ್ದಾರೆ.

ಶಿರೂರು ಶ್ರೀಗಳು ನಿಗೂಡವಾಗಿ ಸಾವನ್ನಪ್ಪಿ ಇವತ್ತಿಗೆ 4 ದಿನಗಳು ಕಳೆದಿದೆ. ಉಡುಪಿಯ ಹಿರಿಯಡ್ಕದಲ್ಲಿರುವ ಶಿರೂರು ಮೂಲ ಮಠ ಈಗ ಖಾಕಿಯ ಸುಪರ್ದಿಯಲ್ಲಿದೆ. ಶೀರೂರು ಶ್ರೀಗಳದ್ದು ಸಾವು ಸಹಜ ಸಾವಲ್ಲ ಎಂಬ ದೂರು ಪೊಲೀಸ್ ಇಲಾಖೆಯಲ್ಲಿ ದಾಖಲಾಗುತ್ತೋ ಅಲ್ಲಿಂದ ಪ್ರಕರಣದ ತನಿಖೆ ಚುರುಕುಗೊಳ್ಳಲು ಶುರುವಾಗಿದೆ.

ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಲಕ್ಷ್ಮಣ್ ನಿಬರಂಗಿ ನೇತೃತ್ವದ ತಂಡ ವಿಶೇಷ ಪ್ರಕರಣ ತನಿಖೆಯನ್ನು ನಡೆಸುತ್ತಿದೆ. ಶಿರೂರು ಮೂಲ ಮಠದಲ್ಲಿ ತನಿಖಾ ತಂಡ ಮಠದ ಇಂಚು ಇಂಚು ಸ್ಥಳಗಳನ್ನು ಪರಿಶೀಲನೆ ಮಾಡುತ್ತಿದೆ. ಇಗಾಗಲೇ ಮಠದ ಸಿಬಂದ್ದಿಗಳನ್ನು ರಹಸ್ಯ ಕೋಣೆಯಲ್ಲಿರಿಸಿ ವಿಚಾರಣೆ ಒಳಪಡಿಸಿ ಮಾಹಿತಿಯ ಕಲೆ ಹಾಕುತ್ತಿದ್ದಾರೆ.

ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದಂತೆ ಶಿರೂರು ಶ್ರೀ ಗಳ ನಿಗೂಡ ಸಾವಿನ ಟ್ವಿಸ್ಟ್ ಒಂದೊಂದೆ ಹೊರಬೀಳುತ್ತಿದೆ. ಮಠದ ಅವರಣದ ಒಳಗಿನ ಸಿಬಂದ್ದಿಗಳನ್ನು ಈವರೆಗೆ ವಿಚಾರಣೆಗೆ ಒಳಪಡಿಸಿದ ತಂಡ ಇದೀಗ ಮತ್ತೊಬ್ಬರನ್ನು ರಹಸ್ಯವಾಗಿ ವಿಚಾರಣೆ ನಡೆಸಿದ್ದಾರೆ. ಪೋಲಿಸರ ವಿಚಾರಣೆಯ ಸಂದರ್ಭ ಒಂದು ಸತ್ಯ ಸಂಗತಿಯೊಂದು ಬಯಲಾಗಿದೆ. ಶಿರೂರು ಶ್ರೀಗಳಿಗೆ ಶಿರ್ಸಿ ಮೂಲದ ರಮ್ಯ ಶೆಟ್ಟಿ ಎಂಬ ಮಹಿಳೆಯ ಸಂಗ ಇರುವುದು ಬೆಳಕಿಗೆ ಬಂದಿದೆ . ರಮ್ಯ ಶೆಟ್ಟಿಯನ್ನು ಪೋಲಿಸರು ಹಲವು ಬಾರಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಇವಳಿಂದ ತನಿಖಾ ತಂಡ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದೆ. ಕಳೆದ ಹಲವು ವರ್ಷಗಳಿಂದ ಶೀರೂರು ಶ್ರೀಗಳೊಂದಿಗೆ ಸಂಬಂದ ಇರಿಸಿರುವ ಈಕೆ ಶ್ರೀಗಳ ಯೋಗಕ್ಷೇಮವನ್ನು ಈಕೆಯೇ ನೋಡುತ್ತಿದ್ದಳು ಎಂಬುವುದು ತನಿಖೆಯಿಂದ ಬಟ್ಟ ಬಯಲಾಗಿದೆ. ಹೀಗಾಗಿ ಶಿರೂರು ಶ್ರೀಗಳ ಸಾವಿನಲ್ಲಿ ಈಕೆಯ ಕೈವಾಡ ಇರಬಹುವುದೇ ಅನುಮಾನಗಳಿದ್ದು ಈ ಅಯಾಮದಲ್ಲೂ ಕೂಡಾ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಮತ್ತೋಂಡದೆ ಶಿರೂರು ಮೂಲ ಮಠದಲ್ಲಿ ಗೋಡಂಬಿ ರಸದ ಬಾಟಲಿಯೊಂದು ಪತ್ತೆಯಾಗಿದೆ. ಪತ್ತೆಯಾದ ಬಾಟಲಿಯಲ್ಲಿ ವಿಷ ಇತ್ತು ಎಂಬ ವದಂತಿ ಕೂಡಾ ಹಬ್ಬಿತ್ತು. ಆದ್ರೆ ಇದೊಂದು ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವ ಗೋಡಂಬಿ ಜ್ಯೂಸ್ ಎಂಬುವುದು ತಿಳಿದು ಬಂದಿದೆ. ಶಿರೂರು ಶ್ರೀಗಳು ಇದನ್ನು ದಿನನಿತ್ಯ ಸೇವಿಸುತ್ತಿದ್ದು ರಮ್ಯ ಶೆಟ್ಟಿ ಇದನ್ನು ಖರೀದಿ ಮಾಡಿ ಮಠಕ್ಕೆ ತರುತ್ತಿದ್ದರು ಎಂಬ ವಿಚಾರ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಮತ್ತೋಂದಡೆಯಲ್ಲಿ ಶ್ರೀಗಳ ನಿಗೂಡ ಸಾವಿನ ಬಳಿಕ ದಿನಕ್ಕೋಂದು ಶ್ರೀಗಳ ಅಡಿಯೋ ದ್ವನಿ ಸುರುಳಿ ಹೊರ ಬೀಳುತ್ತಿದ್ದು ಶ್ರೀಗಳ ಸಾವಿನ್ಯ ರಹಸ್ಯ ಮತ್ತಷ್ಟು ರೋಚಕತೆಯನ್ನು ಪಡೆದುಕೊಳ್ತಾ ಇದೆ. ಹೊಸದಾಗಿ ಬಿಡುಗಡೆಯಾಗಿರುವ ಶ್ರೀಗಳ ದ್ವನಿ ಸುರುಳಿ ಅಷ್ಟ ಮಠಾದೀಶರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅಷ್ಟ ಮಠದ ಅಭಿಮಾನಿಗಳಿಗೆ ಕೂಡ ಈ ದ್ವನಿ ಸುರುಳಿ ಶಾಕ್ ನೀಡಿದೆ. ಕೃಷ್ಣಾಪುರ ಸೇರಿದಂತೆ ಅಷ್ಟ ಮಠಾದೀಶರಿಗೆ ಮಕ್ಕಳಿದ್ದಾರೆ. ಅವರು ಮಾಡಿರುವ ತಪ್ಪಿನ ಮುಂದೆ ನನ್ನದು ಅಂತಹ ದೊಡ್ಡ ತಪ್ಪು ಎನೂ ಇಲ್ಲ. ಮಠದಲ್ಲಿ ಸೆಕ್ಸ್ ಈ ಹಿಂದೆ ಇತ್ತು ಮುಂದೆಯೂ ಇರುತ್ತೇ. ಎಲ್ಲಾ ಮಠಾದೀಶರು ಇದಕ್ಕೆ ಹೊರತಾಗಿಲ್ಲ. ಅಷ್ಠ ಮಠಾದೀಶರ ವಿರುದ್ದ ದ್ವನಿ ಎತ್ತಿದ ಮಠಾದೀಶರು ಯಾರೇ ಇರಲಿ ಅವರನ್ನು ಬಾಕಿ ಉಳಿದ ಮಠಾದೀಶರು ಯಮನ ಪಾದ ಸೇರಿಸುತ್ತಾರೆ ಎಂಬ ಆರೋಪವನ್ನು ದ್ವನಿ ಸುರುಳಿಯಲ್ಲಿ ಶಿರೂರು ಶ್ರೀಗಳು ಹೊರಿಸಿದ್ದಾರೆ. ಶಿರುರು ಶ್ರೀ ಹಾಗೂ ಅಷ್ಠ ಮಠಾದೀಶರ ನಡುವಿನ ವೈರತ್ವ ಈ ಹಿಂದೆಯೇ ವ್ಯಕ್ತ ವಾಗಿತ್ತು. ಪಠದ ದೆವರ ವಿಚಾರದಲ್ಲಿ ಸಿರೂರು ಶ್ರೀ ಅಷ್ಠ ಮಠಾದೀಶರ ವಿರುದ್ದ ಕಾನೂನು ಸಮರ ಸಾರಿದ್ದರು. ಅಷ್ಠ ಮಠಾದೀಶರ ವಿರುದ್ದ ದ್ವೇಷ ಕಟ್ಟಿಕೊಂಡ ಕಾರಣಕ್ಕೆ ಶಿರೂರು ಶ್ರೀಗಳು ಯಮನ ಪಾದ ಸೇರಿದ್ರೋ. ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತ ವಾಗುತ್ತಿದೆ.

ಇನ್ನೂ ಶಿರೂರು ಶ್ರೀಗಳ ಹಾಗೂ ಲ್ಯಾಂಡ್ ಮಾಫಿಯಾ ನಡುವಿನ ಸಂಬಂದ ಕೂಡಾ ಬಹಿರಂಗಗೊಂಡಿದೆ. ಲ್ಯಾಂಡ್ ಮಾಫಿಯಾದೊಂದಿಗೆ ಶೀರುರು ಶ್ರಿಗಳು ವ್ಯವಹಾರ ನಡೆಸುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಇಗಾಗಲೇ ಉಡುಪಿಯ ಹೃದಯ ಬಾಗದಲ್ಲಿ ಶಿರುರು ಶ್ರೀಗಳು ಮುಂಬೈ ಉದ್ಯಮಿಯೊಂದಿಗೆ ವವ್ಯಹಾರದಲ್ಲಿ ಪಾಲುದಾರರಾಗಿ ತೊಡಗಿದ್ದರು ಎನ್ನಲಾಗಿದೆ. ಉಡುಪಿಯ ಕಲ್ಸಂಕದಲ್ಲಿ ಕನಕ ಮಾಲ್ ತೆರಯುವ ಸಿದ್ದತೆಯನ್ನು ನಡೆಸಿದ್ದರು. ಆದ್ರೆ ಹಣಕಸಿನ ವಿಚಾರದಲ್ಲಿ ಈ ಯೋಜನೆ ಯಶ್ವಸ್ಸು ಕಂಡಿಲ್ಲ. ಮಾಲ್‍ನ ಕಟ್ಟಡದ ಕಾಮಗಾರಿ ಹಣಕಾಸಿನ ತೊಂದರೆಯಿಂದ ಪೂರ್ತಿಯಾಗದೆ ಅರ್ದದಲ್ಲೇ ನಿಂತಿದೆ. ಇದರಲ್ಲಿ ಸಿರೂರು ಶ್ರೀಗಳಿಗೆ ಮುಂಬೈ ಮೂಲದ ಉದ್ಯಮಿ ಕೋಟಿ ಕೋಟಿ ರೂಪಾಯಿ ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಮಣಿಪಾಲದ ಪ್ರಸಿದ್ದ ಹೈಟೇಕ್ ಚಿತ್ರ ಮಂದಿರದ ವಹಿವಾಟುವಿನಲ್ಲಿ ಶಿರೂರು ಶ್ರೀಗಳು ಪಾಲುದಾರಗಿದ್ದರು . ಈ ವವ್ಯಹಾರದಲ್ಲಿ ಕೂಡಾ ಶ್ರೀಗಳು ಮೃತ ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿಯ ಸಂಬಂದಿಕರೊಂದಿಗೆ ವ್ಯವಹಾರ ನಡೆಸುವಾಗ ಕೋಟಿ ಕೊಟಿ ಸಾಲ ನೀಡಿದ್ದರು. ಸಾಲವನ್ನು ವಾಪಸ್ಸು ನೀಡುವಂತೆ ರಾಜೇಶ್ವರಿ ಶೆಟ್ಟಿಯ ಸಂಬಂದಿಕರಲ್ಲಿ ಕೇಳಿದಾಗ ಅವರು ಶ್ರೀಗಳೊಂದಿಗೆ ಮಾರಮಾರಿ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಲ್ಯಾಂಡ್ ಮಪಿಯಾ ಹಾಗೂ ವವ್ಯಹಾರದಲ್ಲಿ ಕೂಡಾ ಶಿರೂರು ಶ್ರೀಗಳು ನಿಗೂಡವಾಗಿ ಕೊಲೆಯಾಗಿರ ಬಹುವುದು ಎಂಬ ಶಂಕೆ ಕೂಡಾ ವ್ಯಕ್ತ ವಾಗುತ್ತಿದೆ.

ಒಟ್ಟಿನಲ್ಲಿ ಶೀರೂರು ಶ್ರೀಗಳ ನಿಗುಡ ಸಾವಿನ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದು ಪೋಲಿಸರಿಗೆ ಶ್ರೀಗಳ ಸಾವಿನ ರಹಸ್ಯವನ್ನು ಬೇದಿಸಲು ಸವಾಲಾಗಿ ಪರಿಣಮಿಸಿದೆ ಅಂದ್ರೆ ತಪ್ಪಗಲಾರದು

Comments are closed.