ಬೆಂಗಳೂರು: ದೇವರ ಮೇಲೆ ಕೇಸ್ ಹಾಕಿದಾಗ ಕಿಚ್ಚ ಸುದೀಪ್ ಮುರಾರಿಯಾಗಿ ಪ್ರತ್ಯಕ್ಷನಾಗೋದೇ ಮುಕುಂದ ಮುರಾರಿ ಚಿತ್ರ. ಆದ್ರೆ, ಇಲ್ಲೊಂದ್ಕಡೆ ಸುದೀಪ್ ಬರಬೇಕು ಅಂತ ದೇವಿ ಯೊಂದು ಮೈಮೇಲೆ ಬಂದು ಬಡಬಡಿಸ್ತಾ ಇದೆ. ಜೊತೆಗೆ ದರ್ಶನ್ ಅನ್ನೂ ಕರೆಸಿಕೊಳ್ಳುತ್ತಂತೆ ಈ ದೇವರು.
ಬೆಂಗಳೂರಿನ ಯಶವಂತಪುರ ಸಮೀಪದ ಮತ್ತಿಕೆರೆಯಲ್ಲಿರುವ ಸೋನಾದೇವಿಯವರ ಮನೆಯಲ್ಲೇ ಕರಿಯಮ್ಮ ದೇವಿ ನೆಲೆಸಿದ್ದಾಳೆ ಎಂಬುದು ಇವರ ನಂಬಿಕೆ. ಇದನ್ನ ನಂಬಿ ಜನ ಬರತೊಡಗಿದ್ದಾರೆ. ಈ ಕರಿಯಮ್ಮ ದೇವಿ ಈಗ ಚಿತ್ರನಟರಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ನನಗೊಂದು ದೇವಸ್ಥಾನ ಕಟ್ಟಿಸಿಕೊಡಬೇಕು ಅಂತ ಬೇಡಿಕೆ ಇಟ್ಟಿದೆಯಂತೆ.
ಬುಧವಾರ, ಭಾನುವಾರ ಹೊರತುಪಡಿಸಿ ಮಿಕ್ಕೆಲ್ಲಾ ದಿನ ಬೆಳಗ್ಗೆ ಸೋನಾದೇವಿ ಪೂಜೆ ಮಾಡುತ್ತಿದ್ದಂತೆ ಕರಿಯಮ್ಮದೇವಿ ಹಾಜರಾಗಿ ಭಕ್ತರ ಕಷ್ಟ ಆಲಿಸ್ತಾಳೆ. ಸುದೀಪ್ ಮತ್ತು ದರ್ಶನ್ ಅವರನ್ನ ಮೂರು ತಿಂಗಳಲ್ಲಿ ನನ್ನ ಬಳಿ ಕರೆಸಿಕೊಳ್ತೀನಿ ಅಂತಲೂ ಕರಿಯಮ್ಮ ದೇವಿ ಹೇಳುತ್ತಾಳಂತ್ತೆ. ಅದು ನಿಜವಾಗುತ್ತೆ ಅನ್ನೋದು ಅಲ್ಲಿನವರ ನಂಬಿಕೆ. ದೇವಿಯ ಕೃಪೆಯಿಂದ ಅನೇಕರಿಗೆ ಮಕ್ಕಳ ಭಾಗ್ಯ, ಕಂಕಣ ಭಾಗ್ಯ, ಉದ್ಯೋಗ ಭಾಗ್ಯ, ಸಂಪತ್ತಿನ ಭಾಗ್ಯ ಸಿಕ್ಕಿದೆಯಂತೆ. ವಿಶೇಷ ಅಂದ್ರೆ ಮುಸ್ಲಿಮರು ಕೂಡ ಈ ದೇವಿಯ ಹತ್ತಿರ ಬರುತ್ತಾರೆ.
ಕರಿಯಮ್ಮ ದೇವಿಯ ಆಜ್ಞೆಯನ್ನು ಸುದೀಪ್, ದರ್ಶನ್ ಇಲ್ಲಿಗೆ ಬರುತ್ತಾರಾ ಇಲ್ಲವಾ ಅನ್ನೋದನ್ನ ಕಾದು ನೋಡಬೇಕು. ದೇವರು ಮನುಷ್ಯನ ಮೈ ಮೇಲೆ ಬರುತ್ತೆ ಅಥವಾ ಬರಲ್ಲ ಅಂತಾ ನಂಬುವುದು ಅವರವರ ನಂಬಿಕೆಗೆ ಬಿಟ್ಟಿದ್ದು.
Comments are closed.