Photo: Ashok belman
ದುಬೈ: ಧ್ವನಿ ಪ್ರತಿಷ್ಠಾನದ ಆಶ್ರಯದಲ್ಲಿ ಸೆಪ್ಟೆಂಬರ್ 23 ರಂದು ದುಬೈಯ ಜೆಎಸ್ಎಸ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವ 2 ನೇ ‘ಮಧ್ಯ ಪ್ರಾಚ್ಯ ಸಾಹಿತ್ಯ ಸಮ್ಮೇಳನ 2016’ ರ ಲಾಂಛನ ಅನಾವರಣ ಕಾರ್ಯಕ್ರಮವು ಶುಕ್ರವಾರದಂದು ದುಬೈಯ ಬುರ್ಜ್ ಖಲೀಫಾ ರೆಸಿಡೆನ್ಸ್ ಟವರ್ ನಲ್ಲಿ ನಡೆಯಿತು.
ಸಮಾರಂಭದಲ್ಲಿದ್ದ ಇತರ ಅತಿಥಿಗಳೊಂದಿಗೆ ಸೇರಿ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ನಿರ್ದೇಶಕ, ನಟ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಭಾಷೆಯ ಬೆಳೆವಣಿಗೆಗೆ ಧ್ವನಿ ಪ್ರತಿಷ್ಠಾನದ ಕೊಡುಗೆ ಅನನ್ಯ. ಇದರ ಮುಖ್ಯಸ್ಥರಾಗಿರುವ ಪ್ರಕಾಶ್ ಪಯ್ಯಾರ್ ಕನ್ನಡ ಭಾಷೆ-ಸಾಹಿತ್ಯ, ಕವಿ, ಬರಹಗಾರರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ರಿಲಿಯೆಬ್ಲ್ ಫ್ಯಾಬ್ರಿಕೇಟರ್ಸ್ ನಿರ್ದೇಶಕ ಜೇಮ್ಸ್ ಮೆಂಡೋನ್ಸಾ, ಉದ್ಯಮಿ ದೇವುಕುಮಾರ್ ವೇದಿಕೆಯಲ್ಲಿ ಕಾಂಬ್ಳಿ ಉಪಸ್ಥಿತರಿದ್ದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
Comments are closed.