ಕರಾವಳಿ

ಉದ್ಯಾವರ: ಭಿಕ್ಷೆ ನೆಪದಲ್ಲಿ ಬಂದು 8 ಪವನ್ ಚಿನ್ನ ಕದ್ದ ಫಕೀರ!

Pinterest LinkedIn Tumblr

ಉಡುಪಿ: ಭಿಕ್ಷೆ ಕೇಳುವ ನೆಪದಲ್ಲಿ ಮುಸ್ಲೀಂ ಮಹಿಳೆಯರಿದ್ದ ಮನೆಗೆ ಬಂದ ಫಕೀರನೋರ್ವ 8 ಪವನ್ ಚಿನ್ನ ಲಪಟಾಯಿಸಿ ಪರಾರಿಯಾದ ಘಟನೆ ಉಡುಪಿಯ ಉದ್ಯಾವರ ಗ್ರಾಮದಲ್ಲಿ ನಡೆದಿದೆ. ಆಯಿಷಾ ಎನ್ನುವವರು ಚಿನ್ನ ಕಳೆದುಕೊಂಡ ಮಹಿಳೆ.

ಗುರುವಾರ ಮಧ್ಯಾಹ್ನದ ಸುಮಾರಿಗೆ ಆಯಿಷಾ ಮತ್ತು ಅವರ ಅತ್ತೆ ಮನೆಯಲ್ಲಿದ್ದ ವೇಳೆ ಪಕೀರ ಆಗಮಿಸಿದ್ದು ತಮ್ಮ ಮನೆಗೆ ಮಾಟ ಮಂತ್ರ ಮಾಡಿಸಿದ್ದು ಅದನ್ನು ನಿವಾರಿಸುವುದಾಗಿ ಹೇಳಿ ಮನೆಯೊಳಕ್ಕೆ ಬಂದು ತಮ್ಮ ಮನೆಯಲ್ಲಿರುವ ಚಿನ್ನ ತರಲು ಹೇಳುತ್ತಾನೆ. ಆತನ ಸೂಚನೆಯಂತೆ ಚಿನ್ನ ತಂದಿಟ್ಟಾಗ ಅದನ್ನು ಮಡಿಕೆಯಲ್ಲಿ ಹಾಕಿ ಪೂಜೆ ಮಾಡುವ ನೆಪದಲ್ಲಿ ಮನೆಯವರ ದಿಕ್ಕು ತಪ್ಪಿಸಿ ಚಿನ್ನ ಲಪಾಟಾಯಿಸಿ ಪರಾರಿಯಾಗುತ್ತಾನೆ.

ಈ ಬಗ್ಗೆ ಆಯೆಷಾ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಯೆಶಾ ಮನೆ ಪಕ್ಕದಲ್ಲಿದ್ದ ಇನ್ನೊಂದು ಮನೆಯ ಸಿಸಿ ಕ್ಯಾಮೆರಾದಲ್ಲಿ ಕಳ್ಳ ಪಕೀರನ ಫೋಟೋ ಲಭಿಸಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.

Comments are closed.