ಕ್ರೀಡೆ

ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯಕ್ಕೆ ಹಾರ್ದಿಕ್ ಅಲಭ್ಯ, ಇದು ತಂಡಕ್ಕೆ ಭಾರೀ ಹಿನ್ನಡೆಯಾಗಿದೆ: ಕೊಹ್ಲಿ

Pinterest LinkedIn Tumblr

ನೆಪಿಯಾರ್: ತಮ್ಮ ಅಶ್ಲೀಲ ಹೇಳಿಕೆಯಿಂದ ಹಾರ್ದಿಕ್ ಪಾಂಡ್ಯ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದು ಇದು ತಂಡಕ್ಕೆ ಭಾರೀ ಹಿನ್ನಡೆಯಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಳೆಯಿಂದ ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಅಲಭ್ಯತೆ ಕುರಿತು ಮಾತನಾಡಿದ್ದಾರೆ.

ಮುಂಬರುವ ವಿಶ್ವಕಪ್ ಹಿನ್ನೆಲೆಯಲ್ಲಿ ಈ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ತಂಡಕ್ಕೆ ಎಷ್ಟು ಮುಖ್ಯವೋ ಅದೇ ರೀತಿ ತಂಡದ ವೇಗಿಗಳ ಸಾಮರ್ಥ್ಯವನ್ನು ಅರಿಯಲು ಇದು ಮುಖ್ಯವಾಗಿತ್ತು. ಇನ್ನು ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಗಿದ್ದು ತಂಡಕ್ಕೆ ನೆರವಾಗುತ್ತಿತ್ತು. ಇತರ ತಂಡಗಳಲ್ಲಿ ನೋಡಿದರೆ ಎರಡು ಅಥವಾ ಮೂವರು ಆಲ್ ರೌಂಡರ್ ಗಳು ಇರುತ್ತಾರೆ. ಇದು ಪ್ರತಿಷ್ಠಿತ ಟೂರ್ನಿಯಲ್ಲಿ ಬೌಲಿಂಗ್ ಅವಕಾಶಗಳನ್ನು ಹೆಚ್ಚಿಸುತ್ತವೆ ಎಂದು ಹೇಳಿದ್ದಾರೆ.

ತಂಡದಲ್ಲಿ ಆಲ್ ರೌಂಡರ್ ಗಳು ಇದ್ದರೆ ಕನಿಷ್ಠ ಮೂವರು ವೇಗಿಗಳನ್ನು ಆಡಿಸಬಹುದು. ಆಲ್ ರೌಂಡರ್ ಗಳು ಇಲ್ಲದಿದ್ದಾಗ ಬೌಲಿಂಗ್ ಗಾಗಿ ನಾಲ್ಕರಿಂದ ಐವರು ವೇಗಿಗಳಿಗೆ ಅವಕಾಶ ನೀಡಬೇಕಾಗುತ್ತದೆ. ಇದು ಬ್ಯಾಟಿಂಗ್ ಮೇಲೆ ಪರಿಣಾಮ ಬೀಳುತ್ತದೆ ಎಂದರು.

Comments are closed.