ಕ್ರೀಡೆ

‘ವಾಮಾಚಾರದಿಂದ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದೆವು’

Pinterest LinkedIn Tumblr


ಕೊಲೊಂಬೊ: ಕ್ರಿಕೆಟಿಗರು ವಾಮಾಚಾರದ ಮೊರೆ ಹೋಗಿ ಗೆದ್ದಿರುವ ಉದಾಹರಣೆ ಎಲ್ಲಾದರೂ ಕೇಳಿದ್ದೀರಾ? ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಶ್ರೀಲಂಕಾ ವಾಮಾಚಾರದಿಂದಾಗಿ ಟೆಸ್ಟ್ ಸರಣಿ ಗೆದ್ದಿದೆಯಂತೆ!

ಹಾಗಂತ ಸ್ವತಃ ಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಹೇಳಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಪಾಕ್ ವಿರುದ್ಧ ಶ್ರೀಲಂಕಾ ಟೆಸ್ಟ್ ಸರಣಿ ಗೆದ್ದಿತ್ತು. ಇದಕ್ಕೆ ಕಾರಣ ಮಾಟಗಾತಿಯೊಬ್ಬರ ಆಶೀರ್ವಾದ ಎಂದು ಚಂಡಿಮಾಲ್ ಹೇಳಿಕೊಂಡಿದ್ದಾರೆ.

‘ನಿಮ್ಮಲ್ಲಿ ಎಷ್ಟೇ ಪ್ರತಿಭೆ ಇರಬಹುದು. ಆದರೆ ಇಂತಹವರ ಆಶೀರ್ವಾದವಿಲ್ಲದೇ ಗೆಲ್ಲಲು ಸಾಧ್ಯವಿಲ್ಲ’ ಎಂದು ಚಂಡಿಮಾಲ್ ಹೇಳಿಕೊಂಡಿದ್ದಾರೆ. ಲಂಕಾ ನಾಯಕನ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

Comments are closed.